Advertisement

ಕೇರಳ: ತೀವ್ರಗೊಂಡ ನಿಫಾ ವೈರಸ್‌ ಆತಂಕ,5ರವರೆಗೂ ಶಾಲೆಗಳಿಗೆ ಬೀಗ

10:19 AM Jun 02, 2018 | Team Udayavani |

ತಿರುವನಂತಪುರ: ಕೇರಳದಲ್ಲಿ ಈಗಾಗಲೇ 17 ಮಂದಿಯನ್ನು ಬಲಿತೆಗೆದುಕೊಂಡಿರುವ ನಿಫಾ ವೈರಸ್‌ ಭೀತಿ ಇನ್ನಷ್ಟು ತೀವ್ರಗೊಂಡಿದ್ದು, ಜನರು ಆದಷ್ಟು ಎಚ್ಚರಿಕೆಯಿಂದಿರುವಂತೆ ಸರಕಾರ ಸೂಚಿಸಿದೆ. ಇನ್ನೊಂದೆಡೆ, ಬಲುಶೆÏàರಿ ಎಂಬಲ್ಲಿನ ತಾಲೂಕು ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್‌ಗಳನ್ನು ರಜೆಯಲ್ಲಿ ಕಳುಹಿಸಲಾಗಿದೆ.

Advertisement

ಕಳೆದ 2 ದಿನಗಳಲ್ಲಿ ಮೃತಪಟ್ಟ ಇಬ್ಬರು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ನಂತರ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು. ಈ ರೋಗಿಗಳೊಂದಿಗೆ ಸಂಪರ್ಕ ಹೊಂದಿದ್ದ ನಾಲ್ವರು ವೈದ್ಯರು ಹಾಗೂ ನರ್ಸ್‌ಗಳಿಗೆ ವಾರ ರಜೆ ತೆಗೆದುಕೊಂಡು, ವಿಶ್ರಾಂತಿ ಪಡೆಯುವಂತೆ  ಸೂಚಿಸಲಾಗಿದೆ. ಆಸ್ಪತ್ರೆಯ ಕಾರ್ಯನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಇದೇ ವೇಳೆ, ಕಲ್ಲಿಕೋಟೆ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಸೂಪರಿಂಟೆಂಡೆಂಟ್‌ ಕೂಡ ನಿಫಾ ವೈರಸ್‌ಗೆ ಬಲಿಯಾದ ಹಿನ್ನೆಲೆಯಲ್ಲಿ, ಸದ್ಯಕ್ಕೆ ಜಿಲ್ಲಾ ನ್ಯಾಯಾಲಯದ ಕಾರ್ಯನಿರ್ವಹಣೆ ಸ್ಥಗಿತಗೊಳಿಸಬೇಕೆಂದು ಜಿಲ್ಲಾ ಬಾರ್‌ ಅಸೋಸಿಯೇಷನ್‌ ಆಗ್ರಹಿಸಿದೆ.

ಶಾಲೆ ಆರಂಭವಾಗಲಿಲ್ಲ: ನಿಫಾ ಭೀತಿ ಹಿನ್ನೆಲೆಯಲ್ಲಿ ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಬೇಸಗೆ ರಜೆ ಮುಗಿದರೂ ಶುಕ್ರವಾರ ಶಾಲೆ ಆರಂಭವಾಗಲಿಲ್ಲ. ಜೂ.5ರವರೆಗೆ ಶಾಲೆಗಳನ್ನು ತೆರೆಯದೇ ಇರಲು ನಿರ್ಧರಿಸಲಾಗಿದೆ. ಇದೇ ವೇಳೆ, ಕಲ್ಲಿಕೋಟೆಯ ಆಸ್ಪತ್ರೆಗಳಿಗೆ ಭೇಟಿ ನೀಡಿರುವಂಥ ಎಲ್ಲರೂ ಕೂಡಲೇ “ನಿಫಾ ಘಟಕ’ವನ್ನು ಸಂಪರ್ಕಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next