Advertisement

Shivarajkumar: ಕೇರಳ ಸ್ಟೋರಿ ನಿರ್ದೇಶಕರ ಜೊತೆ ಶಿವಣ್ಣ ಸಿನಿಮಾ?; ಭೇಟಿ ಫೋಟೋ ವೈರಲ್

06:13 PM Aug 29, 2023 | Team Udayavani |

ಬೆಂಗಳೂರು: ʼದಿ ಕೇರಳ ಸ್ಟೋರಿʼ ಸಿನಿಮಾದ ಮೂಲಕ ಸುದ್ದಿಯಾದ ನಿರ್ದೇಶಕ ಸುದೀಪ್ತೋ ಸೇನ್ ಕನ್ನಡದ ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿರುವುದು ಸದ್ದು ಮಾಡಿದೆ.

Advertisement

ʼಜೈಲರ್‌ʼ ಸಿನಿಮಾದ ಬಳಿಕ ಶಿವರಾಜ್‌ ಕುಮಾರ್‌ ಅವರಿಗೆ ಅನ್ಯಭಾಷೆಯ ಸಿನಿಮಾರಂಗದಿಂದ ಆಫರ್‌ ಗಳು ಬರುತ್ತಿವೆ. ʼಜೈಲರ್‌ʼ ನಲ್ಲಿನ ಅವರ ಅತಿಥಿ ಪಾತ್ರಕ್ಕೆ ಫ್ಯಾನ್ಸ್‌ ಗಳು ಫಿದಾ ಆಗಿದ್ದಾರೆ. ಇದು ಮಾತ್ರವಲ್ಲದೆ ತಮಿಳಿನ  ಧನುಷ್‌ ಅವರ ʼಕ್ಯಾಪ್ಟನ್‌ ಮಿಲ್ಲರ್‌ʼ ನಲ್ಲೂ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ.

ʼದಿ ಕೇರಳ ಸ್ಟೋರಿʼ ಸಿನಿಮಾ ಒಂದಷ್ಟು ವಿವಾದಕ್ಕೆ ಗುರಿಯಾಗಿತ್ತು. ವಿವಾದಕ್ಕೆ ಒಳಗಾದರೂ ಬಾಕ್ಸ್‌ ಆಫೀಸ್‌ ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ʼದಿ ಕೇರಳ ಸ್ಟೋರಿʼ ಬಳಿಕ ನಿರ್ದೇಶಕ ಸುದೀಪ್ತೋ ಸೇನ್ ʼಬಸ್ತರ್‌ʼ ಎನ್ನುವ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ. ಈ ಸಿನಿಮಾವನ್ನು ಕೇರಳ ಸ್ಟೋರಿ ನಿರ್ಮಿಸಿದ ಸಂಸ್ಥೆಯೇ ನಿರ್ಮಾಣ ಮಾಡಲಿದೆ.

ಈ ನಡುವೆ ಕೇರಳ ಸ್ಟೋರಿ ನಿರ್ದೇಶಕ ಸುದೀಪ್ತೋ ಸೇನ್ ಅವರು ಸ್ಯಾಂಡಲ್‌ ವುಡ್‌ ನಟ ಶಿವರಾಜ್‌ ಕುಮಾರ್‌ ಅವರನ್ನು ಭೇಟಿ ಆಗಿದ್ದಾರೆ. ರಹಸ್ಯವಾಗಿ ಶಿವರಾಜ್‌ ಕುಮಾರ್‌ ಅವರನ್ನು ಅವರ ನಿವಾಸದಲ್ಲಿ ಅವರು ಭೇಟಿ ಆಗಿದ್ದಾರೆ. ಆದರೆ ಅವರ ಭೇಟಿ ವೇಳೆಗಿನ ಫೋಟೋ ಲೀಕ್‌ ಆಗಿದ್ದು ವೈರಲ್‌ ಆಗಿದೆ.

ಹಿಂದಿ ಸಿನಿಮಾವೊಂದರ ಕುರಿತಾಗಿ ಚರ್ಚಿಸಿಲು ಸುದೀಪ್ತೋ ಸೇನ್ ಅವರು ಶಿವಣ್ಣರನ್ನು ಭೇಟಿ ಆಗಿದ್ದಾರೆ ಎನ್ನಲಾಗಿದೆ. ಅವರ ಭೇಟಿಯ ವೇಳೆ ನಿರ್ದೇಶಕ ಎನ್ ಎಸ್ ರಾಜಕುಮಾರ್ ಅವರು ಕೂಡ ಇದ್ದರು.

Advertisement

ಶಿವರಾಜ್‌ ಕುಮಾರ್‌ ಸುದೀಪ್ತೋ ಅವರ ಆಫರ್‌ ಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ದಿನಾಂಕ ಮತ್ತಿತರ ವಿಚಾರದ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ.  ಒಂದು ವೇಳೆ ಇದು ಅಧಿಕೃತವಾದರೆ ಶಿವಣ್ಣ ಬಾಲಿವುಡ್‌ ಗೆ ಎಂಟ್ರಿ ಕೊಡಲಿದ್ದಾರೆ.

ಸದ್ಯ ಶಿವರಾಜ್‌ ಕುಮಾರ್‌ ಶ್ರಿನೀ ಅವರ ʼಘೋಸ್ಟ್‌ʼ ʼಕರಟಕ ದಮನಕʼ, ʼ45ʼ,ʼ ಭೈರತಿ ರಣಂಗಲ್‌ʼ ಮುಂತಾದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದಲ್ಲದೇ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೂ ಶಿವಣ್ಣ  ನಟಿಸಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next