ತಿರುವಂತಪುರ: ಕೇರಳದಲ್ಲಿ ಗಗನ ಕ್ಕೇರುತ್ತಿರುವ ಅಕ್ಕಿ ಬೆಲೆ ಹಾಗೂ ಅಸಮರ್ಪಕ ಲಭ್ಯತೆ ಯನ್ನು ಖಂಡಿಸಿ ಕೇರಳ ವಿಧಾನ ಸಭೆಗೆ ಮುತ್ತಿಗೆ ಹಾಕಲು ರಾಜ್ಯ ಮಹಿಳಾ ಕಾಂಗ್ರೆಸ್ ಘಟಕ ನಡೆಸುತ್ತಿದ್ದ ಪ್ರತಿಭಟನೆ ಸೋಮ ವಾರ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಕಾರರನ್ನು ಚದುರಿ ಸಲು ಪೊಲೀಸರು ಜಲಫಿರಂಗಿ ಬಳ ಸಿದ್ದು, ಘಟನೆಯಲ್ಲಿ ಕಾಂಗ್ರೆ ಸ್ ರಾಜ್ಯಸಭೆ ಸಂಸದೆ ಜೆಬಿ ಮಾಥರ್ ಗಾಯ ಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಖಾಲಿ ಮಡಿಕೆಗಳನ್ನು ಕೊಂಡೊಯ್ದು ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು ಪೊಲೀಸರತ್ತ ಅದೇ ಮಡಿಕೆಗಳ ನ್ನು ಎಸೆಯಲು ಮುಂದಾಗಿದ್ದಾರೆ. ಪ್ರತಿಭಟನಕಾರರನ್ನು ಹಿಮ್ಮೆಟ್ಟಿಸಲು ಯತ್ನಿಸಿದರೂ ಹಿಂದೆ ಸರಿಯದೇ ಇದ್ದಾಗ ಜಲ ಫಿರಂಗಿ ಬಳಕೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.ಈ ವೇಳೆ ಸಂಸದೆ ಜೆಬಿ ಮಾಥರ್ ಅಸ್ವಸ್ಥರಾಗಿದ್ದಾರೆ.