Advertisement

ಕೇರಳದಲ್ಲಿ ನಿರೀಕ್ಷೆಗೂ ಮೊದಲೇ ಮುಂಗಾರು ಪ್ರವೇಶಿಸಲಿದೆಯಂತೆ

11:02 PM May 07, 2022 | Team Udayavani |

ಪುಣೆ: ದೇಶದ ರೈತಾಪಿ ವರ್ಗದವರಿಗೆ ಖುಷಿ ನೀಡುವ ಸುದ್ದಿ ಇಲ್ಲುಂಟು. ಪ್ರಸಕ್ತ ವರ್ಷದ ಮುಂಗಾರು ಕೇರಳಕ್ಕೆ ಅವಧಿಗಿಂತ ಮುಂಚಿತವಾಗಿಯೇ ಅಂದರೆ ಮೇ 20ರಂದೇ ಆಗಮಿಸಲಿದೆ.

Advertisement

ಪುಣೆಯಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟ್ರಾಪಿಕಲ್‌ ಮೆಟ್ರಾಲಜಿ (ಐಐಟಿಎಂ) ಐಎಂಡಿಗಾಗಿಯೇ ಅಭಿವೃದ್ಧಿಪಡಿಸಿರುವ ಹೊಸ ರೀತಿಯ ಮಳೆ ಮುನ್ಸೂಚನೆ ನೀಡುವ ವ್ಯವಸ್ಥೆಯ ಆಧಾರದಲ್ಲಿ ಈ ಮುನ್ಸೂಚನೆ ನೀಡಲಾಗಿದೆ.

“ಮೇ 5ರಿಂದ ಜೂ.1ರ ವರೆಗೆ ಪ್ರಕಟಿಸಲಾಗಿರುವ ಹವಾಮಾನ ಮುನ್ಸೂಚನೆ ಪ್ರಕಾರ ಕೇರಳಕ್ಕೆ ಮೇ 20ರ ಆಸುಪಾಸಿನಲ್ಲಿಯೇ ಮುಂಗಾರು ಪ್ರವೇಶಿಸಲಿದೆ. ಏ.28ರಂದು ಬಿಡುಗಡೆ ಮಾಡಲಾಗಿದ್ದ ವಿಸ್ತೃತ ಹವಾಮಾನ ಮುನ್ಸೂಚನೆ ಪ್ರಕಾರವೇ ಮೇ 19-25ರ ವರೆಗಿನ ಅವಧಿಯಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಹೇಳಲಾಗಿತ್ತು’ ಎಂದು ಸಂಸ್ಥೆಯ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ : 40 ಕೋಟಿ ವಂಚನೆ : ಆಪ್‌ ಶಾಸಕ ಜಸ್ವಂತ್‌ ಸಿಂಗ್‌ ಗಜ್ಜನ್‌ ಮಜ್ರಾ ನಿವಾಸಕ್ಕೆ ಸಿಬಿಐ ದಾಳಿ

Advertisement

Udayavani is now on Telegram. Click here to join our channel and stay updated with the latest news.

Next