Advertisement

Kerala Lottery: ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಪಾಂಡವಪುರದ ಮೆಕ್ಯಾನಿಕ್

04:19 PM Oct 10, 2024 | Team Udayavani |

ಮಂಡ್ಯ: ಮೆಕ್ಯಾನಿಕಲ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಘಟನೆ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ.

Advertisement

ಪಾಂಡವಪುರ ಪಟ್ಟಣದ ನಿವಾಸಿ ಮೆಕ್ಯಾನಿಕಲ್ ಅಲ್ತಾಫ್ ಕೇರಳದ ಓಣಂ ಲಾಟರಿಯಲ್ಲಿ 25 ಕೋಟಿ ರೂ. ಗೆದ್ದಿದ್ದಾರೆ.

ಕೇರಳದ ವಯನಾಡಿನ ಸಂಬಂಧಿಕರ ಮನೆಗೆ ಹೋಗಿದ್ದಾಗ ಟಿಕೆಟ್ ಖರೀದಿಸಿದ್ದರು. 250 ರೂ ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದ್ದರು. ಓಣಂ ಲಾಟರಿಯಲ್ಲಿ ಸುಮಾರು 71 ಲಕ್ಷ ಜನರು ಟಿಕೆಟ್ ಖರೀದಿಸಿದ್ದರು.

ಎಲ್ಲರೂ ಯಾರಿಗೆ ಲಾಟರಿ ಬಂದಿರಬಹುದು ಎಂದು ಕಾತರದಿಂದ ಕಾಯುತ್ತಿದ್ದರು. ಆದರೆ ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ ಅಲ್ತಾಫ್ ಗೆ ಒಲಿದು ಬಂದಿದೆ.

Advertisement

ಲಾಟರಿ ಹಣ ಪಡೆಯಲು ಅಲ್ತಾಫ್ ಕೇರಳಕ್ಕೆ ತೆರಳಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ.

25 ಕೋಟಿ ರೂ. ಹಣದಲ್ಲಿ ತೆರಿಗೆ ಸೇರಿದಂತೆ ಮತ್ತಿತರ ಟ್ಯಾಕ್ಸ್ ಗಳು ಕಳೆದು 13 ಕೋಟಿ ರೂ. ಹೆಚ್ಚು ಸಿಗಲಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next