Advertisement

CM Siddramaiah: “ರಾಜೀನಾಮೆ ನೀಡಬೇಡಿ’ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ

03:37 AM Sep 30, 2024 | Team Udayavani |

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ “ರಾಜೀನಾಮೆ ನೀಡಬೇಡಿ’ ಎಂದು ಅಭಿಮಾನಿಯೊಬ್ಬ ಸಿದ್ದರಾಮಯ್ಯ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾನೆ. ತಾಲೂಕಿನ ಮೊತ್ತಹಳ್ಳಿಯ ಯುವಕ ಸಚಿನ್‌, ತನ್ನ ಕೈನಿಂದ ತೆಗೆದ ರಕ್ತದಿಂದ ಪತ್ರ ಬರೆದು ಮನವಿ ಮಾಡಿದ್ದಾನೆ.

Advertisement

ಈ ಪತ್ರವನ್ನು ಸೋಮವಾರ ಮುಖ್ಯಮಂತ್ರಿಗಳ ಕಚೇರಿಗೆ ಪೋಸ್ಟ್‌ ಮಾಡಲಿದ್ದಾನೆ ಎನ್ನಲಾಗಿದೆ. ರಾಜೀನಾಮೆ ನೀಡದೆ ತನಿಖೆ ಎದುರಿಸಬೇಕು. ಹಿಂದೆ ಇದ್ದ ರಾಜಕಾರಣಿಗಳು ಅವರ ತಪ್ಪಿಗೆ ರಾಜೀನಾಮೆ ಕೊಟ್ಟಿದ್ರಾ? ರಾಜ್ಯದ ಇತಿಹಾಸದಲ್ಲಿ ನಿಮ್ಮಷ್ಟು ಯೋಜನೆಗಳನ್ನು ಕೊಟ್ಟ ಮುಖ್ಯಮಂತ್ರಿ ಮತ್ತೊಬ್ಬರಿಲ್ಲ.

ತನಿಖೆ ಎದುರಿಸಿದರೆ ನಿಷ್ಕಳಂಕವಾಗಿ ಹೊರಬರುತ್ತೀರಿ ಎಂಬ ವಿಶ್ವಾಸ ಇಡೀ ರಾಜ್ಯದ ಜನತೆಗೆ ಇದೆ ಎಂದು ಪತ್ರದಲ್ಲಿ ತಿಳಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next