Advertisement

ಕೇರಳ ಕರ್ನಾಟಕ ಗಡಿಭಾಗಕ್ಕೂ ವಕ್ಕರಿಸಿದ ಕೋವಿಡ್ ಸೋಂಕು : ಮನೆ ಸೀಲ್‌ ಡೌನ್‌

04:31 PM Jul 22, 2020 | sudhir |

ಈಶ್ವರಮಂಗಲ: ಕೇರಳ ಕರ್ನಾಟಕ ಗಡಿಭಾಗವಾದ ನೆಟ್ಟಣಿಗೆ ಮುಟ್ನೂರು ಗ್ರಾಮದ ಮೇನಾಲದ ನಿವಾಸಿಯೋರ್ವವರಿಗೆ ಕೋವಿಡ್ ಪಾಸಿಟಿವ್‌ ಬಂದಿದ್ದು ಮನೆಯನ್ನು ಅಧಿಕಾರಿಗಳು ಸೀಲ್‌ ಡೌನ್‌ ಮಾಡಿದ್ದಾರೆ.

Advertisement

ಪಾಸಿಟಿವ್‌ ಬಂದ ವ್ಯಕ್ತಿ ಈಶ್ವರಮಂಗಲದಲ್ಲಿ ರಿಕ್ಷಾ ಚಲಾಯಿಸುತ್ತಿದ್ದು ಈತನ ಸಂಪರ್ಕದಲ್ಲಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.

ಸದ್ಯ ಕೋವಿಡ್ ಸೋಂಕಿತ ವ್ಯಕ್ತಿಯನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಆತನ ಪತ್ನಿ ಕೋವಿಡ್ ವಾರಿಯರ್ಸ್‌ ಆಗಿದ್ದಾರೆ ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿ ಇನ್ನಷ್ಟೇ ಬರಬೇಕಾಗಿದೆ.

ಸೀಲ್‌ ಡೌನ್‌ ಮಾಡಲಾದ ಮನೆಗೆ ಪುತ್ತೂರು ತಾಲೂಕು ಹಿಂದು ಜಾಗರಣ ವೇದಿಕೆಯ ವತಿಯಿಂದ ಆಹಾರದ ಕಿಟ್‌ ನ್ನು ಅಧಿಕಾರಿಗಳ ಸಹಾಯದಿಂದ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next