Advertisement

ಪತ್ರಕರ್ತನ ಸಾವು: ಐಎಎಸ್‌ ಅಧಿಕಾರಿ ಬಂಧನ

01:14 AM Aug 04, 2019 | Team Udayavani |

ತಿರುವನಂತಪುರ: ಮದ್ಯ ಸೇವಿಸಿ ಕಾರು ಚಲಾಯಿಸಿದ ಐಎಎಸ್‌ ಅಧಿಕಾರಿ ವೆಂಕಿಟರಮಣನ್‌ ಎಂಬುವರು ಕೇರಳ ಪತ್ರಕರ್ತರೊಬ್ಬರ ಸಾವಿಗೆ ಕಾರಣರಾಗಿದ್ದಾರೆ. ಸದ್ಯ ಅವರನ್ನು ತಿರುವನಂತಪುರ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಪಾನಮತ್ತರಾಗಿ ಕಾರು ಚಲಾಯಿಸುತ್ತಿದ್ದ ಐಎಎಸ್‌ ಅಧಿಕಾರಿ ವೆಂಕಿಟರಮಣನ್‌ ಅವರು ತಮ್ಮ ಕಾರನ್ನು ಪತ್ರಕರ್ತ ಕೆ.ಮೊಹಮ್ಮದ್‌ ಬಶೀರ್‌ (35) ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಬಶೀರ್‌ ಸ್ಥಳದಲ್ಲೇ ಅಸುನೀಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next