Advertisement

ಅನಧಿಕೃತ ಚಾರಣ: ಎಚ್ಚರಿಕೆ ನೀಡಿದ ಕೇರಳ ಸರ್ಕಾರ

08:17 PM Feb 14, 2022 | Team Udayavani |

ತಿರುವನಂತಪುರ: ಅನಧಿಕೃತ ಚಾರಣಗಳು ಹಾಗೂ ಕ್ಯಾಂಪಿಂಗ್‌ಗಳ ಮೂಲಕ ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಮಾಲಂಪುಳ ಪ್ರಾಂತ್ಯದಲ್ಲಿರುವ ಕುರುಂಬಾಚಿ ಬೆಟ್ಟವನ್ನು ಹತ್ತುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇರಳ ಸರ್ಕಾರ ಎಚ್ಚರಿಕೆ ನೀಡಿದೆ.

Advertisement

ಇದೇ ಬೆಟ್ಟದ ಮೇಲೆ ಇತ್ತೀಚೆಗೆ ಹತ್ತಿದ್ದ ಯುವಕನೊಬ್ಬ ಬೆಟ್ಟದ ಮಧ್ಯೆ ಬಂಡೆಗಳ ನಡುವೆ ಸಿಲುಕಿ ಹಾಕಿಕೊಂಡಿದ್ದ. 48 ಗಂಟೆಗಳ ನಂತರ ಆತನನ್ನು ರಕ್ಷಿಸಲಾಗಿತ್ತು.

ಇದು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಬೆಟ್ಟವನ್ನು ಹತ್ತಲು ಅನೇಕ ಚಾರಣಿಗರು ಆಗಮಿಸುತ್ತಿರುವ ವರದಿಗಳು ಬಂದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಈ ಎಚ್ಚರಿಕೆಯನ್ನು ನೀಡಿದೆ.

ಇದನ್ನೂ ಓದಿ:ಉಚ್ಚ ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು : ಸಿಎಂ ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next