Advertisement

ಶಬರಿಮಲೆಗೆ ರೈಲು ಸಂಪರ್ಕ ಕಲ್ಪಿಸಲು ಕೇರಳ ಸರಕಾರ ಹಿಂದೇಟು

09:59 AM Jan 13, 2020 | sudhir |

ನವದೆಹಲಿ: ಪುಣ್ಯಕ್ಷೇತ್ರ ಶಬರಿಮಲೆಗೆ ರೈಲ್ವೆ ಸಂಪರ್ಕ ಕಲ್ಪಿಸಲು ಕೇರಳ ಸರ್ಕಾರ ಸಹಕಾರ ನೀಡುತ್ತಿಲ್ಲ. ಸಾಕಷ್ಟು ವಿಳಂಬ ಮಾಡುತ್ತಿರುವುದರಿಂದ ಭಾರೀ ವೆಚ್ಚ ಭರಿಸಬೇಕಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಪತ್ರ ಬರೆದಿರುವ ಅವರು, ಶಬರಿಮಲೆ ಸಮೀಪ ಯಾವುದೇ ರೈಲ್ವೆ ನಿಲ್ದಾಣವಿಲ್ಲ. ಕೊಟ್ಟಾಯಂ, ತಿರುವಳ್ಳ, ಚೆಂಗನೂರು ರೈಲ್ವೆ ನಿಲ್ದಾಣಗಳು ಶಬರಿಮಲೆಯಿಂದ 90 ಕಿ.ಮೀ. ದೂರ ಇವೆ. 1997ರಲ್ಲಿ 111 ಕಿ.ಮೀ. ಉದ್ದದ ಅಂಗಮಾಲಿ-ಶಬರಿಮಲೆ ರೈಲ್ವೆ ಸಂಪರ್ಕಕ್ಕೆ ಯೋಜನೆ ರೂಪಿಸಲಾಗಿತ್ತು. ಅಂದು ಇದಕ್ಕೆ 550 ಕೋಟಿ ರೂ. ವೆಚ್ಚವಾಗುತ್ತಿತ್ತು. ಆದರೆ, ವಿಳಂಬದಿಂದ ಇಂದು ಈ ವೆಚ್ಚವು 1,566 ಕೋಟಿ ರೂ. ತಲುಪಿದೆ. ಶೇ. 512ರಷ್ಟು ವೆಚ್ಚ ಏರಿಕೆಯಾಗಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next