Advertisement

ಕೇರಳಕ್ಕೆ 10 ಕೋಟಿ ಪರಿಹಾರ; 30 ಗ್ರಾಮ ದತ್ತು: HDFC ಬ್ಯಾಂಕ್‌

04:07 PM Aug 29, 2018 | Team Udayavani |

ಮುಂಬಯಿ : ವಿನಾಶಕಾರಿ ಪ್ರವಾಹ, ಭೂಕುಸಿತಕ್ಕೆ ನಲುಗಿರುವ ಕೇರಳದ ಪರಿಹಾರ ಯತ್ನಕ್ಕೆ 10 ಕೋಟಿ ರೂ. ಗಳನ್ನು ದಾನವಾಗಿ ನೀಡಿರುವ ಎಚ್‌ ಡಿ ಎಫ್ ಸಿ ಬ್ಯಾಂಕ್‌ ಕೇರಳದ ಪ್ರವಾಹ ಪೀಡಿತ 30 ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳಿದೆ.

Advertisement

ಕೇರಳದಲ್ಲಿನ ತನ್ನ ಗ್ರಾಹಕರ ಗಸ್ಟ್‌ ತಿಂಗಳ ಕ್ರೆಡಿಟ್‌ ಕಾರ್ಡ್‌ ಮತ್ತು ಸಾಲ ಕಂತಿನ ತಡ ಪಾವತಿಯ ಮೇಲಿನ ಶುಲ್ಕವನ್ನೂ ತಾನು ಮಾಫಿ ಮಾಡುವುದಾಗಿ ಹೇಳಿರುವ ಖಾಸಗಿ ರಂಗದ ಎಚ್‌ ಡಿ ಎಫ್ ಸಿ ಬ್ಯಾಂಕ್‌ ಉದಾರತೆ ಮೆರೆದಿದೆ.

ಕೇರಳ ಜನರ ಈ ಕಷ್ಟಕಾಲದಲ್ಲಿ  ಅವರನ್ನು ಬೆಂಬಲಿಸಿ ನಾವು ಅವರೊಂದಿಗೆ ನಿಲ್ಲುತ್ತೇವೆ ಎಂದು ಎಚ್‌ ಡಿ ಎಫ್ ಸಿ ಮ್ಯಾನೇಜಿಂಗ್‌ ಡೈರೆಕ್ಟರ್‌ ಆದಿತ್ಯ ಪುರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next