Advertisement

ಕೇರಳ: 45,000 ಹೆಕ್ಟೇರ್‌ನಲ್ಲಿನ ಬೆಳೆ ನಾಶ

06:00 AM Aug 28, 2018 | Team Udayavani |

ನವದೆಹಲಿ: ಕೇರಳದ ಜಲ ಪ್ರವಾಹದಿಂದಾಗಿ ಅಲ್ಲಿನ 45,000 ಹೆಕ್ಟೇರ್‌ ಪ್ರದೇಶದಲ್ಲಿದ್ದ ಬೆಳೆಗಳು ಸಂಪೂರ್ಣ ನಾಶವಾಗಿದೆ ಎಂದು ಕೇಂದ್ರ ಕೃಷಿ ಇಲಾಖೆಯ ಕಾರ್ಯದರ್ಶಿ ಶೋಭನಾ ಕೆ. ಪಟ್ನಾಯಕ್‌ ತಿಳಿಸಿದ್ದಾರೆ. 20,000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಹಾಗೂ ಬಾಳೆ ಹಣ್ಣು  ಕೃಷಿ ಹಾಳಾಗಿದ್ದರೆ, 2,000 ಹೆಕ್ಟೇರ್‌ಗಳಲ್ಲಿದ್ದ ಮಸಾಲೆ ಪದಾರ್ಥಗಳ ಬೆಳೆಗಳು ನಾಶವಾಗಿವೆ ಎಂದು ಅವರು ವಿವರಿಸಿದ್ದಾರೆ. ಇನ್ನು, ಕೇಂದ್ರ ಗೃಹ ಇಲಾಖೆ, ಮಳೆಯಿಂದಾಗಿ ದೇಶಾದ್ಯಂತ ಈ ವರ್ಷ 1,276 ಜನರು ಸಾವಿಗೀಡಾಗಿದ್ದು, ಕೇರಳದಲ್ಲಿ 443 ಜನರು ಮರಣ ಹೊಂದಿದ್ದಾರೆಂದು ಹೇಳಿದೆ. ಏತನ್ಮಧ್ಯೆ, ಯುಎಇ ಅಧ್ಯಕ್ಷ ಮೊಹಮ್ಮದ್‌ ಬಿನ್‌ ರಶೀದ್‌ ಅಲ್‌ ಮಖೂ¤ಮ್‌ ಭಾನುವಾರ ಮಾಡಿರುವ ಟ್ವೀಟ್‌ಗಳು, ಅವರ ಸರ್ಕಾರ ಕೇರಳಕ್ಕೆ ನೀಡಬೇಕೆಂದಿದ್ದ 700 ಕೋಟಿ ರೂ. ನೆರವನ್ನು ಭಾರತ ತಿರಸ್ಕರಿಸಿದ್ದಕ್ಕೆ ಸಂಬಂಧಿಸಿದವು ಎಂಬ ಗುಮಾನಿ ಹುಟ್ಟು ಹಾಕಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next