Advertisement

ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್‌ಗೆ ತೆರಳಿದ ಕೇರಳದ ರೈತ ನಾಪತ್ತೆ

11:25 AM Feb 21, 2023 | Team Udayavani |

ಜೆರುಸಲೇಂ : ಇಸ್ರೇಲ್‌ನ ಆಧುನಿಕ ಕೃಷಿ ಮಾದರಿಯ ಅಧ್ಯಯನಕ್ಕಾಗಿ ಕೇರಳ ಸರ್ಕಾರ ಪ್ರಾಯೋಜಿತವಾಗಿ ಇಸ್ರೇಲ್‌ಗೆ ತೆರಳಿದ್ದ ಕೇರಳ ನಿಯೋಗದ ರೈತರೊಬ್ಬರು ನಾಪತ್ತೆಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಇಸ್ರೇಲ್‌ ಸರ್ಕಾರ ತಿಳಿಸಿದೆ.

Advertisement

ಕಣ್ಣೂರು ಜಿಲ್ಲೆಯ ಉಲಿಕಲ್‌ ಪಂಚಾಯತ್‌ ನಿವಾಸಿಯಾಗಿರುವ ಬಿಜು ಕುರಿಯನ್‌, ಕೇರಳ ರೈತ ನಿಯೋಗದ 28 ಸದಸ್ಯರ ಪೈಕಿ ಒಬ್ಬರಾಗಿದ್ದರು. ಇಸ್ರೇಲ್‌ಗೆ ಭೇಟಿ ನೀಡಿದ್ದ ವೇಳೆ ಫೆ.17ರಂದು ಇದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಅವರನ್ನು ಹುಡಕಲು ಸ್ಥಳೀಯ ಸರ್ಕಾರ ಪ್ರಯತ್ನ ಪಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಹಿನ್ನೆಲೆ ಅವರ ವಿರುದ್ಧ ಪ್ರಕರಣ ದಾಖಲಿಸಿದ ರಾಷ್ಟ್ರಾದ್ಯಂತ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬಿಜು ಸಿಕ್ಕಿದ ತಕ್ಷಣ ಹಸ್ತಾಂತರಿಸುವುದಾಗಿ ಇಸ್ರೇಲ್‌ ಸರ್ಕಾರ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next