Advertisement

WhatsApp ನಲ್ಲಿ ನೋಟ್ಸ್‌ ಕಳಿಸಲು ಕೇರಳ ನಿರ್ಬಂಧ!

02:24 AM Sep 27, 2024 | Team Udayavani |

ತಿರುವನಂತಪುರ: ವಾಟ್ಸ್‌ಆ್ಯಪ್‌ ಸೇರಿ ದಂತೆ ಇತರ ಸಾಮಾಜಿಕ ಜಾಲತಾಣಗಳ ಮೂಲಕ ಅಧ್ಯಯನ ಸಾಮಗ್ರಿ (ಸ್ಟಡಿ ಮೆಟಿರಿಯಲ್‌) ಕಳುಹಿಸುವುದಕ್ಕೆ ಕೇರಳದಲ್ಲಿ ನಿರ್ಬಂಧ ವಿಧಿಸಲಾಗಿದೆ.

Advertisement

ಅಧ್ಯಯನ ಎಂಬುದು ತರಗತಿಯಲ್ಲಿ ನಡೆಯಬೇಕು ಎಂದು ಹೇಳಿರುವ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಈ ಆದೇಶ ಹೊರಡಿಸಿದೆ. ಅಲ್ಲದೇ ಇದನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚನೆ ನೀಡಿದೆ. ವಿದ್ಯಾರ್ಥಿಗಳು ಕೈಬ ರದ ಮೂಲಕ ನೋಟ್ಸ್‌ ಮಾಡುವುದು ಅವರ ಅಧ್ಯಯನದ ದೃಷ್ಟಿಯಿಂದ ಒಳ್ಳೆ ಯದು. ಅದರ ಬದಲು ಡಿಜಿಟಲ್‌ ಮೂಲಕ ನೋಟ್ಸ್‌ಗಳನ್ನು ಪಡೆದು ಕೊಂಡು, ಪ್ರಿಂಟ್‌ ತೆಗೆದುಕೊಂಡು ಓದುವುದರಿಂದ ವಿದ್ಯಾರ್ಥಿಗಳು ಬರೆ ಯುವ ಮತ್ತು ಕಲಿಯುವ ಅವಕಾಶ ದಿಂದ ವಂಚಿತರಾಗಲಿದ್ದಾರೆ ಎಂದು ಶಿಕ್ಷಣ ಇಲಾಖೆ ಹೇಳಿದೆ.

ಕೋವಿಡ್‌ ಸಾಂಕ್ರಾಮಿಕದ ಸಮಯ ದಲ್ಲಿ ಡಿಜಿಟಲ್‌ ಶಿಕ್ಷಣ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು. ಶಾಲೆಗಳು ಮುಚ್ಚಿದ್ದ ರಿಂದ ಮೊಬೈಲ್‌ ಮೂಲಕ ಕಲಿಸುವುದಕ್ಕೆ ಶಿಕ್ಷಣ ವ್ಯವಸ್ಥೆ ಮುಂದಾ ಗಿತ್ತು. ಆದರೆ ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹಲವು ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿ ದ್ದವು. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next