Advertisement

ಕೇರಳ ವಿಧಾನಸಭೆ ಚುನಾವಣೆ: ಎ.5 ಮತ್ತು 6ರಂದು ಕೆಎಸ್‌ ಆರ್‌ ಟಿಸಿ ವಿಶೇಷ ಬಸ್‌ ಸೌಲಭ್ಯ

01:47 PM Apr 01, 2021 | Team Udayavani |

ಕಾಸರಗೋಡು: ವಿಧಾನಸಭೆ ಚುನಾವಣೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಕೆ.ಎಸ್‌.ಆರ್‌.ಟಿ.ಸಿ. ವಿಶೇಷ ಬಸ್‌ ಸಂಚರಿಸಲಿದೆ. ಮೆಟೀರಿಯಲ್‌ ವಿತರಣೆ ದಿನವಾಗಿರುವ ಎ.5, ಮತದಾನ ದಿನವಾಗಿರುವ ಎ.6ರಂದು ಈ ಸಂಚಾರ ಸೌಲಭ್ಯ ದೊರಕಲಿದೆ.

Advertisement

ಎ.5ರಂದು ಮಂಜೇಶ್ವರದಿಂದ ಬೆಳಗ್ಗೆ 6.30, 6.45, 7, 7.15, 7.30 ಗಂಟೆಗೆ ಕಾಲಿಕಡವಿಗೆ ಬಸ್‌ಗಳು ಹೊರಡಲಿವೆ. ಅಂದು ಕಾಲಿಕಡವಿನಿಂದ ಬೆಳಗ್ಗೆ 6.30, 6.45, 7, 7.15, 7.30, 8 ಗಂಟೆಗೆ ಮಂಜೇಶ್ವರ ವರೆಗೆ ಬಸ್‌ ಸಂಚರಿಸಲಿದೆ. ಅಂದು ಚಿತ್ತಾರಿಕಲ್ಲಿನಿಂದ ಕಾಂಞಂಗಾಡಿಗೆ ಬೆಳಗ್ಗೆ 6.30, 7, 7.30, 8, 8.30, 9 ಗಂಟೆಗೆ ಬಸ್‌ ಹೊರಡಲಿವೆ.

ಅಂದು ರಾತ್ರಿ 9, 9.15, 9.30, 9.45, 10, 10.15 ಗಂಟೆಗೆ ಮಂಜೇಶ್ವರದಿಂದ ಕಾಲಿಕಡವಿಗೆ ಕೆ.ಎಸ್‌.ಆರ್‌.ಟಿ.ಸಿ. ಬಸ್‌ಗಳು ಹೊರಡಲಿವೆ. ಅಂದು ಕಾಲಿಕಡಿವಿನಿಂದ ರಾತ್ರಿ 9, 9.15, 9.30, 9.45, 10, 10.15 ಗಂಟೆಗೆ ಮಂಜೇಶ್ವರಕ್ಕೆ ಹೊರಡಲಿವೆ. ಅಂದು ರಾತ್ರಿ 9, 9.30, 10, 10.30, 11, 11.30ಕ್ಕೆ ಕಾಂಞಂಗಾಡಿನಿಂದ ಚಿತ್ತಾರಿಕಲ್ಲಿಗೆ ಬಸ್‌ ಸೇವೆ ನಡೆಸಲಿವೆ. ಚುನಾವಣೆ ಕರ್ತವ್ಯದ ಸಿಬ್ಬಂದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ನಿಲ್ದಾಣ ಖಚಿತಪಡಿಸಲು ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಆದೇಶ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next