Advertisement

ಕೆರಾಡಿ ಗ್ರಾಮ: ಬಿಜೆಪಿ ಜನಸ್ಪಂದನ

06:20 AM Jul 29, 2017 | Team Udayavani |

ಕುಂದಾಪುರ: ಪಂಡಿತ್‌ ದೀನ ದಯಾಳ್‌ ಉಪಾಧ್ಯಾಯ ಜನ್ಮ ಶತಾಬ್ದ ಪ್ರಯುಕ್ತ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಬೈಂದೂರು ವಲಯದ ಬೆಳ್ಳಾಲ ಗ್ರಾಮದಲ್ಲಿ ರಾತ್ರಿ ಗ್ರಾಮ ವಾಸ್ತವ್ಯ ಹೂಡಿ ಎರಡು ದಿನ ಬೈಂದೂರು ಮಂಡಲದ ವಿವಿಧ ದಲಿತ ಕಾಲೋನಿ ಹಾಗೂ ಶಕ್ತಿ ಕೇಂದ್ರಗಳಿಗೆ ಬಿರುಸಿನ ಪ್ರವಾಸ ಕೈಗೊಂಡರು.
ಕೆರಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿ ಯಲ್ಲಿ ಬೃಹತ್‌ ಜನಸ್ಪಂದನ ಕಾರ್ಯಕ್ರಮ ನಡೆಸಲಾಯಿತು.

Advertisement

ಜಿಲ್ಲಾ ಪದಾಧಿಕಾರಿಗಳಾದ ಯಶಪಾಲ್‌ ಸುವರ್ಣ, ರವಿ ಅಮೀನ್‌, ಪ್ರವೀಣ್‌ಕುಮಾರ್‌ ಶೆಟ್ಟಿ ಕಪ್ಸಟ್ಟು, ಚಿಟ್ಟೆ ರಾಜಗೋಪಾಲ ಹೆಗ್ಡೆ, ರಾಜ್ಯ ವಿಸ್ತಾರಕ ಕಲ್‌ವುುರಡಪ್ಪ, ಮಂಡಲ ವಿಸ್ತಾರಕ ನವಿನ್‌ರಾಜ್‌, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಮ್‌. ಸುಕುಮಾರ ಶೆಟ್ಟಿ, ರಾಜ್ಯ ಪರಿಷತ್‌ ಸದಸ್ಯ ರಾಘವೆಂದ್ರ ನೆಂಪು, ಮಂಡಲ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ದೀಪಕ್‌ಕುಮಾರ್‌ ಶೆಟ್ಟಿ, ಬಾಲಚಂದ್ರ ಭಟ್ಟ, ತಾ.ಪಂ. ಸದಸ್ಯರಾದ ದೇವದಾಸ ಶೆಟ್ಟಿ, ಕರಣ್‌ ಪೂಜಾರಿ, ಕೆರಾಡಿ ಗ್ರಾ.ಪಂ. ಅಧ್ಯಕ್ಷ ಸಂತೋಷ ಕೊಠಾರಿ, ಸುದರ್ಶನ ಶೆಟ್ಟಿ, ವಿನೋದ ಶೆಟ್ಟಿ, ಪ್ರವೀಣ ಕುಮಾರ್‌ ಶೆಟ್ಟಿ ಕೊಡ್ಲಾಡಿ, ರೋಹಿತ್‌ಕುಮಾರ್‌ ಶೆಟ್ಟಿ ಉಳ್ಳೂರು ಉಪಸ್ಥಿತರಿದ್ದರು.

ಜನಸ್ಪಂದನ ಕಾರ್ಯಕ್ರಮದ ನಂತರ ನೀರಿಗಾಗಿ ಅರಣ್ಯ ಅಭಿಯಾನದಂತೆ ವಿವಿಧ ತಳಿಯ ಗಿಡಗಳನ್ನು ಜನರಿಗೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next