Advertisement

Kempegowda Layout: ಕೆಂಪೇಗೌಡ ಲೇಔಟ್‌ ಭೂ ಸ್ವಾಧೀನ ಕಗ್ಗಂಟು

10:51 AM Oct 31, 2023 | Team Udayavani |

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವ  ಣೆಯ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಂಡು ಹಲವು ವರ್ಷಗಳೇ ಉರುಳಿದರೂ ಇಲ್ಲಿನ 193 ಎಕರೆ ಸರ್ಕಾರಿ ಭೂಮಿಯನ್ನು ಕಂದಾಯ ಇಲಾಖೆ  ಯಿಂದ ಹಸ್ತಾಂತರಿಸಿಕೊಳ್ಳಲು ಬೆಂಗ ಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪರದಾಡುತ್ತಿದೆ!

Advertisement

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಿಸಿರುವ ಬಿಡಿಎಗೆ ಇದೀಗ ಇಲ್ಲಿನ 193 ಎಕರೆ ಸರ್ಕಾರಿ ಜಮೀನು ಸ್ವಾಧೀನಪಡಿಸಿ ಕೊಳ್ಳುವುದೇ ದೊಡ್ಡ ಸವಾಲಾಗಿದೆ. 2014 ರಿಂದ 2023 ಆಗಸ್ಟ್‌ವೆರೆಗೆ ಹಲವು ಬಾರಿ ಯೋಜನೆಗೆ ಬೇಕಾಗಿ  ರುವ ಸರ್ಕಾರಿ ಜಮೀನನ್ನು ಹಸ್ತಾಂತರಿ ಸುವಂತೆ ಕಂದಾಯ ಇಲಾಖೆಗೆ ಪತ್ರದ ಮೂಲಕ ಬಿಡಿಎ ವಿನಂತಿಸಿಕೊಂಡಿದೆ. ಆದರೆ, ಕಂದಾಯ ಇಲಾಖೆಯಿಂದ ಸೂಕ್ತ ಸ್ಪಂದನೆ ದೊರೆತಿಲ್ಲ. ಇದರಿಂದ ಬಡಾವಣೆಯ ಭಾಗಗಳನ್ನು ಯೋಜನೆಯಂತೆ ನಿರ್ಮಿಸಲು ತೊಡಕಾಗಿದೆ.

ಇತ್ತೀಚೆಗೆ ನಡೆದ ಸಭೆಯಲ್ಲಿ ಜಂಟಿ ಸರ್ವೆ ಮಾಡುವ ಬದಲು ಬಿಡಿಎ ಸರ್ವೆಯರ್‌ಗಳಿಗೆ ಸರ್ವೆ ಕಾರ್ಯವಹಿಸಿ ದಾಖಲಾತಿ ತಯಾರಿಸಲು ಅನುಮತಿ ಪಡೆಯುವ ಬಗ್ಗೆ ಚರ್ಚೆ ನಡೆದಿದೆ. ಸರ್ವೆ ಹಾಗೂ ನೋಂದಣಿ ಇಲಾಖೆಗೆ ಹಸ್ತಾಂತರಿಸಲು ಅನುಮೋದನೆ ಕೋರಿ ಪತ್ರ ಬರೆಯಲು ಚಿಂತಿಸಲಾಗಿದೆ.

ಬಿಡಿಎ ಅಧಿಕಾರಿಗಳು ಏನು ಹೇಳುತ್ತಾರೆ?: ಕೆಂಪೇಗೌಡ ಬಡಾವಣೆಯಲ್ಲಿ ಸರ್ಕಾರಿ ಭೂಮಿ ಎಷ್ಟು ಎಕರೆ ಇದೆ, ಎಲ್ಲೆಲ್ಲಿದೆ ಎಂಬಿತ್ಯಾದಿ ಅಂಶಗಳನ್ನು ತಿಳಿದುಕೊಳ್ಳಲು ಜಂಟಿ ಸರ್ವೆ ಮಾಡಬೇಕಾಗುತ್ತದೆ. ಬಿಡಿಎ ಸರ್ವೆಯರ್‌ಗಳ ಬಳಿ ಆ ದಾಖಲೆಗಳಿರುವುದಿಲ್ಲ. ಕಂದಾಯ ಅಧಿಕಾರಿಗಳ ಬಳಿ ಇದಕ್ಕೆ ಸಂಬಂಧಿಸಿದ ದಾಖಲೆಗ ಳಿರುತ್ತವೆ. ತಾಲೂಕು ಸರ್ವೇಯರ್‌ ಗ್ರಾಂಟ್‌ ಆಗಿರುವ ಭೂಮಿಗೆ ಸಂಬಂಧಿಸಿದ ಗುರುತು, ನೀಲನಕ್ಷೆ, ಸಹಿ ಮಾಡಿ ಬಿಡಿಎ ಭೂಸ್ವಾಧೀನ ವಿಭಾಗಕ್ಕೆ ನೀಡುತ್ತಾರೆ. ಅವುಗಳನ್ನು ಪರಿಶೀಲನೆ ನಡೆಸಿದ ಬಳಿಕ ನಾವು ನಮ್ಮ ಸುಪರ್ದಿಗೆ ಪಡೆಯುತ್ತೇವೆ.

ಕಾಮಗಾರಿ ನಡೆದಿದೆ: ಕಂದಾಯ ಇಲಾಖೆ ಹಾಗೂ ಬಿಡಿಎ ಎರಡೂ ರಾಜ್ಯ ಸರ್ಕಾರದ ಅಧೀನ ಇಲಾಖೆಗಳೇ ಆಗಿರುವುದರಿಂದ ಕೆಲವು ಬಡಾವ ಣೆ  ಗಳಲ್ಲಿ ಅಧಿಕೃತವಾಗಿ ಭೂಮಿ ಸ್ವಾಧೀನಕ್ಕೆ ಪಡೆದು ಕೊಳ್ಳದಿದ್ದರೂ ಅಲ್ಲಿ ಕಾಮಗಾರಿ ನಡೆಸಲಾಗಿದೆ. ಆದರೆ, ಜಂಟಿ ಸರ್ವೆ ಆದರೆ, ಮುಂದೆ ಯಾವುದೇ ವ್ಯಾಜ್ಯಗಳು ಬರುವುದಿಲ್ಲ. ಯಾರ ಜಾಗ ಎಲ್ಲಿದೆ? ಎಷ್ಟಿದೆ? ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಸ್ವಾಧೀನಪಡಿಸಿಕೊ ಳ್ಳ ಬೇಕಿರುವ 193 ಎಕರೆ ಹಳೆಯ ಗ್ರ್ಯಾಂಟ್‌ ಆಗಿರುವುದರಿಂದ ಹಸ್ತಾಂತರ ಪ್ರಕ್ರಿಯೆಗೆ ಹೆಚ್ಚಿನ ಸಮಯ ಹಿಡಿಯುತ್ತದೆ ಎಂದು ಬಿಡಿಎಯ ಭೂಸ್ವಾಧೀನ ವಿಭಾಗದ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.

Advertisement

154 ಎಕರೆ ಜಮೀನು ವಶಕ್ಕೆ ಪಡೆಯಲಿ:

ಸರ್ಕಾರದ 193 ಎಕರೆ ಪ್ರದೇಶವನ್ನು ನಿವೇಶನಾದಾರರ ಸಮ್ಮುಖದಲ್ಲಿ ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಸರ್ವೇ ವಿಭಾಗ ಹಾಗೂ ಬಿಡಿಎ ಒಪ್ಪಿಕೊಂಡಿರುವುದು ಬಡಾವಣೆ ನಿವಾಸಿಗಳ ಹಿತ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. ಇದರ ಜೊತೆಗೆ ಬಿಡಿಎಯು 154 ಎಕರೆಯ ಸರ್ಕಾರಿ ಗ್ರ್ಯಾಂಟ್‌ ಜಮೀನನ್ನು ವಶಪಡಿಸಿಕೊಳ್ಳಬೇಕು. ಇದರಿಂದ ಒಟ್ಟಾರೆ 346 ಎಕರೆ ಭೂ ಸ್ವಾಧೀನಪಡಿಸಿಕೊಂಡಂತೆ ಆಗುತ್ತದೆ. ಕೆಂಪೇಗೌಡ ಬಡಾವಣೆಯ ಮೂಲ ಸೌಕರ್ಯಕ್ಕಾಗಿ 2,500ರಿಂದ 3,500 ಸಾವಿರ ಕೋಟಿ ರೂ. ಖರ್ಚು ಮಾಡಲು ಸರ್ಕಾರ ಮುಂದಾಗಿದೆ. ಆದರೆ, ಬಡಾವಣೆಯಲ್ಲಿ ನಿವೇಶನ ಹೊಂದಿರುವವರ ಸಮಸ್ಯೆ ಆಲಿಸಿ ಪರಿಹಾರಕ್ಕೆ ಸರ್ಕಾರ ಒತ್ತು ನೀಡಬೇಕು ಎನ್ನುತ್ತಾರೆ ಬಡಾವಣೆ ಮುಕ್ತ ವೇದಿಕೆಯ ಅಧ್ಯಕ್ಷ ಶ್ರೀಧರ್‌ ನುಗ್ಗೆಹಳ್ಳಿ.

ಸ್ವಾಧೀನಪಡಿಸಿಕೊಳ್ಳದಿದ್ರೆ ತೊಡಕೇನು?:

193 ಎಕರೆ ಭೂಮಿ ಬಿಡಿಎ ಸ್ವಾಧೀನಪಡಿಸಿಕೊಳ್ಳದಿದ್ದರೆ ಕೆಂಪೇಗೌಡ ಬಡಾವಣೆಯಲ್ಲಿ ನೀರಿನ ಪೂರೈಕೆ, ಒಳಚರಂಡಿ ವ್ಯವಸ್ಥೆ, ರಸ್ತೆ ಸೌಕರ್ಯ ನಿರ್ಮಿಸಲು ಆಗುವುದಿಲ್ಲ, ಮುಖ್ಯರಸ್ತೆ, ಆಂತರಿಕ ರಸ್ತೆ ನಿರ್ಮಾಣಕ್ಕೆ ಜಾಗದ ವಿಚಾರದಲ್ಲಿ ಗೊಂದಲ ಉಂಟಾಗಲಿದೆ. ಇನ್ನಷ್ಟು ನಿವೇಶನ ಹಂಚಿಕೆ ವಿಳಂಬಗತಿಯಲ್ಲಿ ಸಾಗುತ್ತದೆ, ಬಡಾವಣೆಯಲ್ಲಿ ನಿರಂತರತೆ ಕಾಯ್ದುಕೊಳ್ಳಲು ಸಾಧ್ಯವಾಗು  ವುದಿಲ್ಲ. ಅರ್ಧಬರ್ಧ ಕಾಮಗಾರಿ ಯಿಂದ ಇಲ್ಲಿ ನಿವೇಶನ ಖರೀದಿಸಿದವರಿಗೂ ಕಿರಿ-ಕಿರಿ ಉಂಟಾಗಿದೆ. ಮತ್ತೂಂದೆಡೆ ಬಿಡಿಎ, ಕಂದಾಯ ಇಲಾಖೆ ಅಧಿಕಾರಿಗಳು ಆಗಾಗ ವರ್ಗಾವಣೆ ಆಗುತ್ತಿರುವುದರಿಂದ ಹೊಸದಾಗಿ ಬರುವ ಅಧಿಕಾರಿಗಳಿಗೆ ಬಡಾವಣೆ ಸಮಸ್ಯೆಗಳ ಬಗ್ಗೆ ಅರಿವು ಇರುವುದಿಲ್ಲ. ಈ ಸಮಸ್ಯೆಗೆ ಮುಕ್ತಿ ಸಿಗಬೇಕಿದ್ದರೆ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.

-ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next