Advertisement

ಕೆಮ್ಮಣ್ಣು ರಸ್ತೆ ಅಪಘಾತ: ಗಾಯಾಳು ನಿವೃತ್ತ ಪೋಸ್ಟ್‌ಮ್ಯಾನ್‌ ಸಾವು

12:06 PM Aug 13, 2018 | Harsha Rao |

ಮಲ್ಪೆ: ಶುಕ್ರವಾರ ಮಧ್ಯಾಹ್ನ ನಡೆದ ಬೈಕ್‌ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ನಿವೃತ್ತ ಪೋಸ್ಟ್‌ಮ್ಯಾನ್‌ ಕೆಮ್ಮಣ್ಣು ಗುಳಿಬೆಟ್ಟಿನ ಜಯ ಟಿ. ಗುಳಿಬೆಟ್ಟು (64)  ಅವರು ಶನಿವಾರ ರಾತ್ರಿ ಸಾವನ್ನಪ್ಪಿದ್ದಾರೆ. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Advertisement

ಶುಕ್ರವಾರ ಮಧ್ಯಾಹ್ನ ಕೆಮ್ಮಣ್ಣಿನಿಂದ ಹಂಪನ ಕಟ್ಟೆಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಮತ್ತೂಂದು ಬೈಕ್‌ ಢಿಕ್ಕಿ ಹೊಡೆದಿದೆ. ಪರಿಣಾಮ ಅವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.

ನಾಟಕ ಕಲಾವಿದರಾಗಿದ್ದ ಅವರು ಕೆಮ್ಮಣ್ಣು ಗುಡ್ಯಾಂ ಭದ್ರಕಾಳಿ ಮಹಾ ಮಾರಿಕಾಂಬಾ ದೇವಸ್ಥಾನದ ಮೊಕ್ತೇಸರರಾಗಿದ್ದರು. ತೋನ್ಸೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ, ಗುಳಿಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷರಾಗಿ, ಗಜಾನನ ಬಿಲ್ಲವ ಸಂಘ ಸಹಿ ತ ವಿವಿಧ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next