Advertisement

“ಯುವವಾಹಿನಿ ಕಾರ್ಯ ನಿರಂತರವಾಗಿರಲಿ’

02:46 PM Apr 10, 2017 | |

ವೇಣೂರು: ಸಂಘಟನೆ ಮೂಲಕ ಸಮಾಜವನ್ನು ಕಟ್ಟಿ ಯುವಕರನ್ನು ಒಗ್ಗೂಡಿಸುವ ಯುವವಾಹಿನಿ ಕಾರ್ಯ ನಿರಂತರವಾಗಿರಲಿ ಎಂದು ಅಖೀಲ ಭಾರತ ಬಿಲ್ಲವರ ಮಹಾ ಮಂಡಲದ ಉಪಾಧ್ಯಕ್ಷ, ನಿವೃತ್ತ ಎಸ್‌ಪಿ ಪಿತಾಂಬರ ಹೇರಾಜೆ ಹೇಳಿದರು.

Advertisement

ಅವರು ರವಿವಾರ ವೇಣೂರು ಸ.ಪ.ಪೂ. ಕಾಲೇಜು ಮೈದಾನದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ವೇಣೂರು ಯುವವಾಹಿನಿ ಸಂಚಾಲನ ಸಮಿತಿ ನೇತೃತ್ವದಲ್ಲಿ ಜರಗಿದ ತಾ| ಮಟ್ಟದ ಬಿಲ್ಲವ ಸಮಾಜದವರ ಕ್ರಿಕೆಟ್‌ ಪಂದ್ಯ ಯುವವಾಹಿನಿ ಟ್ರೋಫಿ-2017 ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೆ„ಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ  ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ., ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಪದ್ಮನಾಭ ಮರೋಳಿ, ಬೆಳ್ತಂಗಡಿ ಸ್ಥಾಯೀ ಸಮಿತಿ ಅಧ್ಯಕ್ಷ ಸುಧೀರ್‌ ಆರ್‌. ಸುವರ್ಣ, ಬೆಳ್ತಂಗಡಿ ಗೆಜ್ಜೆಗಿರಿ ನಂದನಬಿತ್ತಿಲು ಸೇವಾ ಸಮಿತಿ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಬೆಳ್ತಂಗಡಿ ಯುವವಾಹಿನಿ ಘಟಕದ ನಿರ್ದೇಶಕಿ ತಾ.ಪಂ. ಸದಸ್ಯೆ ಕೇಶವತಿ ಎನ್‌., ಬಜಿರೆಯ ಸಂಜೀವ ಸುವರ್ಣ, ವೇಣೂರು ಸ.ಪ.ಪೂ. ಕಾಲೇಜು ಉಪನ್ಯಾಸಕ ಸುಧಾಕರ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ.ಎನ್‌., ತುಕಾರಾಮ್‌ ಪೂಜಾರಿ, ಉಲ್ಲಾಸ್‌ ಕೋಟ್ಯಾನ್‌, ಬೆಳ್ತಂಗಡಿ ಯುವವಾಹಿನಿ ಘಟಕದ ಕಾರ್ಯದರ್ಶಿ ಪ್ರಶಾಂತ್‌ ಮಚ್ಚಿನ, ಯುವವಾಹಿನಿ ವೇಣೂರು ಸಂಚಾಲನ ಸಮಿತಿ ಅಧ್ಯಕ್ಷ ನವೀನ್‌ ಪೂಜಾರಿ ಪಚ್ಚೇರಿ, ಕಾರ್ಯದರ್ಶಿ ಸತೀಶ್‌ ಪಿ.ಎನ್‌.,  ಬೆಳ್ತಂಗಡಿ ಯುವ ಬಿಲ್ಲವ ವೇದಿಕೆಸ್ಥಾಪಕ ಅಧ್ಯಕ್ಷ ಹರೀಶ್‌ ಕುಮಾರ್‌,  ಬೆಳ್ತಂಗಡಿ ಎಪಿಂಎಂಸಿ ಅಧ್ಯಕ್ಷ  ಸತೀಶ್‌ ಕೆ. ಕಾಶಿಪಟ್ಣ, ನಿರ್ದೇಶಕ ಚಿದಾನಂದ ಪೂಜಾರಿ  ಮತ್ತಿತರರು ಉಪಸ್ಥಿತರಿದ್ದರು.

ಸಮ್ಮಾನ:  ವಿವಿಧ ಕ್ಷೇತ್ರದ ಸಾಧಕರಾದ  ರಕ್ಷಾ ಜಾರಿಗೆದಡಿ, ಸಂಧ್ಯಾ, ರಕ್ಷಿತ್‌ ಪುನೆRದಡಿ, ಸಂದೇಶ್‌ ಅವರನ್ನು  ಸಮ್ಮಾನಿಸಲಾಯಿತು. ಕ್ರೀಡಾಕೂಟದ ಪ್ರಧಾನ ಸಂಚಾಲಕ ರಾಕೇಶ್‌ ಕುಮಾರ್‌ ಮೂಡುಕೋಡಿ ಸ್ವಾಗತಿಸಿ ಅರುಣ್‌ ಎಸ್‌. ಕಾರ್ಯಕ್ರಮ ನಿರೂಪಿಸಿ ನವೀನ್‌ ಪಚ್ಚೇರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next