Advertisement

ದೇಹಾರೋಗ್ಯದ ಜತೆ ದೇಶಾರೋಗ್ಯ ಕಾಪಾಡಿ

06:26 AM Jan 13, 2019 | |

ಚಂಡೀಗಢ: ದೇಹದ ಸ್ವಾಸ್ಥ ಕಾಪಾಡಿಕೊಳ್ಳಬೇಕಾದರೆ ಉದರವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ಅದೇ ರೀತಿ ದೇಶ ಆರೋಗ್ಯವಾಗಿರಬೇಕಾದರೆ ಪ್ರತಿ ಗ್ರಾಮ ಹಾಗೂ ನಗರ ಸ್ವತ್ಛವಾಗಿರಬೇಕು. ಆದ್ದರಿಂದ ದೇಹಾರೋಗ್ಯದ ಜತೆ ದೇಶಾರೋಗ್ಯ ಕಾಪಾಡಿ ಎಂದು  ಎಸ್‌ಬಿಎಸ್‌ ಬಯೋಟೆಕ್‌ನ ಪೇಟ್‌ ಸಫಾ ಬ್ರಾಂಡ್‌ನ‌ ರಾಯಭಾರಿ ನಟ ರಾಜು ಶ್ರೀವಾಸ್ತವ್‌ ತಿಳಿಸಿದ್ದಾರೆ.

Advertisement

ಅವರು ಇತೀ¤ಚೆಗೆ ಚಂಡೀಗಢದ ಎಸ್‌ಬಿಎಸ್‌ ಬಯೋಟೆಕ್‌ ಕಚೇರಿಗೆ ಭೇಟಿ ನೀಡಿ ಮಾತನಾಡಿದರು. ದೇಹಾರೋಗ್ಯ ಕೆಡಲು ಉದರ ಕಾರಣ ಎಂದು ತಿಳಿದಿರುವುದರಿಂದ, ನಾವು ಹೊಟ್ಟೆಯನ್ನು ಸ್ವತ್ಛವಾಗಿಟ್ಟುಕೊಳ್ಳಲು ಯತ್ನಿಸುತ್ತೇವೆಯೋ.

ಹಾಗೆಯೇ ಭಾರತದ ಪ್ರತಿಯೊಬ್ಬ ನಾಗರಿಕನೂ ಸ್ವತ್ಛತೆಯ ಬಗ್ಗೆ ಗಮನಹರಿಸಿ ಸುತ್ತಮುತ್ತಲ ಪ್ರದೇಶದ ನೈರ್ಮಲ್ಯ ಕಾಪಾಡಿದರೆ ನಮ್ಮ ದೇಶ ಸ್ವತ್ಛ, ಸುಂದರ ಹಾಗೂ ಆರೋಗ್ಯಪೂರ್ಣ ದೇಶವಾಗುತ್ತದೆ ಎಂದು ತಿಳಿಸಿದ್ದಾರೆ. ಎಸ್‌ಬಿಎಸ್‌ ಬಯೋಟೆಕ್‌ನ ಸಿಎಂಡಿ ಡಾ. ಸಂಜೀವ್‌ ಜುನೇಜ ಅವರು ರಾಜು ಶ್ರೀವಾಸ್ತವ್‌ ಅವರನ್ನು ಕಚೇರಿಗೆ ಸ್ವಾಗತಿಸಿ ಸಿಬ್ಬಂದಿಯನ್ನು ಪರಿಚಯಿಸಿದರು. ನಟ ರಾಜು ಅವರು ಹಿಂದಿ ಚಿತ್ರಗೀತೆಗಳನ್ನು  ಹಾಡಿ ಎಲ್ಲರನ್ನು ರಂಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next