Advertisement

ಕೆದೂರು : ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ : ಯುವಕ ಸ್ಥಳದಲ್ಲಿಯೇ ಸಾವು

10:56 AM Sep 25, 2019 | Suhan S |

ತೆಕ್ಕಟ್ಟೆ : ರಸ್ತೆ ತಿರುವಿನಲ್ಲಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಇನ್ನೊಂದು ಬೈಕ್ ಗೆ  ಢಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಯುವಕ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್‌ನ ಸಮೀಪ  ಸಂಭವಿಸಿದೆ.

Advertisement

ಮೃತ ದುರ್ದೈವಿ ಕೆದೂರು ಶ್ರೀಸಾಯಿಬಾಬಾ ಆಟೋ ವರ್ಕ್ಸ್‌ನ ಮಾಲಕ ಶಾನಾಡಿ ನಿವಾಸಿ ರಾಮಚಂದ್ರ ಕುಲಾಲ್ (26) ಎಂದು ಗುರುತಿಸಲಾಗಿದೆ. ತೆಕ್ಕಟ್ಟೆಯಿಂದ ಹೊಸಮಠದೆಡೆಗೆ ಬೈಕ್‌ನಲ್ಲಿ ಸಾಗುತ್ತಿದ್ದ ಬೈಕ್ ಸವಾರ ಶಿಕ್ಷಕ ಹೊಸಮಠ ಅರಳಿಕಟ್ಟೆ ಮನೆ  ನಿವಾಸಿ ಅರುಣ ಕುಮಾರ್ ಶೆಟ್ಟಿ ಅವರ ಬೈಕ್‌ಗೆ ಚಾರುಕೊಟ್ಟಿಗೆಯಿಂದ ಕೆದೂರು ಕಡೆಗೆ ತನ್ನ ಬೈಕ್‌ನಲ್ಲಿ ಅತೀ ವೇಗದಿಂದ ಬರುತ್ತಿದ್ದ ರಾಮಚಂದ್ರ ಕುಲಾಲ್ ಅವರು ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ನೇರವಾಗಿ ಎದುರಿನಿಂದ ಬರುತ್ತಿದ್ದ ಬೈಕ್ ಗೆ   ಢಿಕ್ಕಿಯಾಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಶಿಕ್ಷಕ ಹೊಸಮಠ ಅರಳಿಕಟ್ಟೆ ಮನೆ ಅರುಣ ಕುಮಾರ್ ಶೆಟ್ಟಿ ಹೊಸಮಠ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತ ರಾಮಚಂದ್ರ ಕುಲಾಲ್ ಅವರು ವಿವಾಹಿತರಾಗಿದ್ದು ತನ್ನ ಪತ್ನಿಯನ್ನು ಗರ್ಭಿಣಿಯಾರುವುದರಿಂದ ತಾಯಿ ಮನೆ ಬೆಂಗಳೂರಿಗೆ ಕಳೆದ ಎರಡು ದಿನದ ಹಿಂದೆ ಅಷ್ಟೇ ಬಿಟ್ಟು ಬಂದಿದ್ದಾರೆ ಎಂದು ಹೇಳಲಾಗಿದೆ. ಪತ್ನಿ , ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.

ವಿಳಂಬವಾಗಿ ಬಂದ ಅಂಬುಲೆನ್ಸ್ : ಘಟನೆ ಸಂಭವಿಸುತ್ತಿದ್ದಂತೆ ತುರ್ತಾಗಿ 108 ಗೆ ಸಂಪರ್ಕ ಕಲ್ಪಿಸಿದರಾದರೂ ತುರ್ತು ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ನಂತರ ಖಾಸಗಿ ಆಂಬುಲೆನ್ಸ್ ಘಟನಾ ಸ್ಥಳಕ್ಕೆ ಬರುವಲ್ಲಿ ವಿಳಂಬವಾಗಿದ್ದು ಈ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ ಪೊಲೀಸ್ ಠಾಣಾಧಿಕಾರಿ ನಿತ್ಯಾನಂದ ಗೌಡ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next