Advertisement

ನಿರಂತರ ಹಿಮಪಾತ: ಕೇದಾರನಾಥ ಯಾತ್ರೆಗೆ ತಾತ್ಕಾಲಿಕ ತಡೆ

12:28 PM May 08, 2018 | udayavani editorial |

ಡೆಹರಾಡೂನ್‌ : ಕಳೆದ ರಾತ್ರಿಯಿಂದ ನಿರಂತರವಾಗಿ ಆಗುತ್ತಿರುವ ಹಿಮಪಾತದಿಂದಾಗಿ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.

Advertisement

ನಿರಂತರ ಹಿಮಪಾತದಿಂದಾಗಿ ಲಿಂಚೌಲಿ ಮತ್ತು ಭೀಮಬಲಿ ನಡುವಿನ ಮಾರ್ಗವು ಮುಚ್ಚಿದ್ದು ಅದನ್ನು ತೆರವುಗೊಳಿಸಿದ ಬಳಿಕ ಮತ್ತೆ ಕೇದಾರನಾಥ ಯಾತ್ರೆ ಮುಂದುವರಿಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಿಮಪಾತದ ಪ್ರಯುಕ್ತ ತಾತ್ಕಾಲಿಕವಾಗಿ ನಿಲುಗಡೆಗೊಂಡಿರುವ ಕೇದಾರನಾಥ ಯಾತ್ರೆಯಲ್ಲಿರುವ ಭಕ್ತರ ಪೈಕಿ ಸುಮಾರು ಆರು ಕಾಂಗ್ರೆಸ್‌ ನಾಯಕರು ಇದ್ದು ಅವರಲ್ಲಿ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವ್‌, ರಾಜ್ಯ ಸಭಾ ಸದಸ್ಯ ಪ್ರದೀಪ್‌ ತಮ್ತಾ, ಸ್ಥಳೀಯ ಶಾಸಕ ಮನೋಜ್‌ ರಾವತ್‌ ಇದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next