Advertisement

ಕೇದಾರನಾಥನ ಗರ್ಭಗುಡಿಯಲ್ಲಿ ಬಂಗಾರದ ಲೇಪಕ್ಕೆ ಪುರೋಹಿತರ ವಿರೋಧ

07:53 PM Sep 17, 2022 | Team Udayavani |

ಡೆಹ್ರಾಡೂನ್‌: ಭಾರತದ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾದ ಕೇದಾರನಾಥ ಶಿವ ದೇವಸ್ಥಾನದ ಗರ್ಭಗುಡಿಯಲ್ಲಿರುವ ನಾಲ್ಕು ಗೋಡೆಗಳಿಗೆ ಬಂಗಾರದ ಹೊದಿಕೆಗಳನ್ನು ಹಾಕಲಾಗುತ್ತಿದೆ. ಇದನ್ನು ಕೇದಾರನಾಥದ ಪುರೋಹಿತರ ಗುಂಪೊಂದು ತೀವ್ರವಾಗಿ ವಿರೋಧಿಸಿದೆ.

Advertisement

ಇದು ಕೇದಾರನಾಥ ದೇವಸ್ಥಾನದ ಪಾರಂಪರಿಕ ಶೈಲಿಯನ್ನು ಹಾಳು ಮಾಡುತ್ತಿದೆ, ಗೋಡೆಗಳ ರೂಪವೇ ಬದಲಾಗುತ್ತಿದೆ ಎನ್ನುವುದು ಈ ಪುರೋಹಿತರ ಕಳವಳ. ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಕೇದಾರನಾಥ ದೇವಸ್ಥಾನದ ಗರ್ಭಗುಡಿಯ ಗೋಡೆಗಳಿಗೆ ಮಹಾರಾಷ್ಟ್ರದ ಶಿವಭಕ್ತರೊಬ್ಬರ ಆಶಯದಂತೆ ಬಂಗಾರದ ಲೇಪನ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಬದರೀನಾಥ-ಕೇದಾರನಾಥ ದೇವಸ್ಥಾನ ಸಮಿತಿ, ಉತ್ತರಾಖಂಡ ಸರ್ಕಾರ ಒಪ್ಪಿಗೆ ಸೂಚಿಸಿವೆ. ಇದಕ್ಕಾಗಿ ಈಗಾಗಲೇ ಗರ್ಭಗುಡಿಯ ನಾಲ್ಕೂ ಗೋಡೆಗಳಲ್ಲಿರುವ ಬೆಳ್ಳಿಯ ಹೊದಿಕೆಯನ್ನು ತೆಗೆಯಲಾಗುತ್ತಿದೆ.

ಆದರೆ, ಈ ಪ್ರಕ್ರಿಯೆಗೆ ದೊಡ್ಡದೊಡ್ಡ ಡ್ರಿಲ್ಲಿಂಗ್‌ ಯಂತ್ರಗಳನ್ನು ಬಳಸಲಾಗುತ್ತಿದೆ. ಹೀಗಾಗಿ, ದೇಗುಲದ ಗೋಡೆಗೆ ಹಾನಿಯಾಗಬಹುದು. ಈ ಯಂತ್ರಗಳಿಂದಲೇ ದೇವಸ್ಥಾನದ ಪಾರಂಪರಿಕತೆ ನಾಶವಾಗುತ್ತಿದೆ ಎನ್ನುವುದು ಪುರೋಹಿತರ ಅಳಲು. ಆದರೆ ಪುರೋಹಿತರ ನಡುವೆಯೇ ಭಿನ್ನಮತ ಸೃಷ್ಟಿಯಾಗಿದೆ. ಕೆಲವು ಹಿರಿಯ ಪುರೋಹಿತರು ಈ ನವೀಕರಣದ ಪರವಾಗಿ ನಿಂತಿದ್ದಾರೆ. ಈ ನವೀಕರಣದಿಂದ ದೇವಸ್ಥಾನದ ಹಿಂದೂ ಧಾರ್ಮಿಕತೆ ಬೆಳೆಯುತ್ತದೆ ಎನ್ನುವುದು ಪರವಾಗಿ ನಿಂತಿರುವವರ ವಾದ.

 

Advertisement

Udayavani is now on Telegram. Click here to join our channel and stay updated with the latest news.

Next