Advertisement

Kedarnath: ಕ್ರಮ ಜರುಗಿಸದಿದ್ದರೆ ಮೊಬೈಲ್‌ ನಿಷೇಧ

09:33 PM Jul 08, 2023 | Team Udayavani |

ಡೆಹ್ರಾಡೂನ್‌: ಕೇದಾರನಾಥ ದೇಗುಲದ ಎದುರಿಗಿನ ಪ್ರೇಮಿಗಳಿಬ್ಬರ ಪ್ರೇಮನಿವೇದನೆ ವಿಡಿಯೋ ಬಗ್ಗೆ ಆಕ್ಷೇಪ ವ್ಯಕ್ತವಾದ ಬಳಿಕವೂ ದೇಗುಲದ ಬಳಿ ಹಲವರು, ರೀಲ್ಸ್‌ ಮಾಡುತ್ತಿರುವುದು ವರದಿಯಾಗಿದೆ. ಈ ಹಿನ್ನೆಲೆ ದೇಗುಲ ಆವರಣದಲ್ಲಿ ರೀಲ್ಸ್‌ ವಿಡಿಯೋ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ನಾವೇ ಮೊಬೈಲ್‌ ನಿಷೇಧಿಸುತ್ತೇವೆಂದು ಕೇದಾರನಾಥ-ಬದರಿನಾಥ ದೇಗುಲ ಮಂಡಳಿ ಪೊಲೀಸರನ್ನು ಒತ್ತಾಯಿಸಿದೆ.

Advertisement

ವಿಡಿಯೋ ಅವಾಂತರವು ಭಕ್ತರ ಭಾವನೆಗೆ ಧಕ್ಕೆ ತಂದಿದೆ. ಈ ಹಿನ್ನೆಲೆ ಪ್ರವಾಸಿಗರ ಕ್ಲಾಕ್‌ರೂಮ್‌ನಲ್ಲಿಯೇ ಮೊಬೈಲ್‌ ಫೋನ್‌ ಇರಿಸಿ ಹೋಗುವಂತೆ ಕ್ರಮ ಜರುಗಿಸಲು ಮಂಡಳಿ ಯೋಜಿಸುತ್ತಿದೆ. ಅದಕ್ಕೂ ಮುಂಚೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಕೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next