Advertisement

KEA Exam Scam: ಆರ್.ಡಿ. ಪಾಟೀಲ್ ಗೆ ರಕ್ಷಣೆ ನೀಡಿದ ಆರೋಪದ ಮೇಲೆ ಇನ್ನಿಬ್ಬರ ಬಂಧನ

09:46 AM Nov 10, 2023 | Team Udayavani |

ಕಲಬುರಗಿ: ಆರ್ ಡಿ ಪಾಟೀಲ್ ಗೆ ಕಲಬುರಗಿಯಲ್ಲಿ ಬಾಡಿಗೆಗೆ ಫ್ಲ್ಯಾಟ್ ನೀಡಿರುವ ಕಾರಣಕ್ಕೆ ಮಾಲೀಕ ಮತ್ತು ಮ್ಯಾನೇಜರ್ ಇಬ್ಬರನ್ನು‌ ಪೊಲೀಸರು ಬಂಧಿಸಿದ್ದಾರೆ.

Advertisement

ಆರ್.ಡಿ.ಪಾಟೀಲ್ ಕಲ್ಬುರ್ಗಿಯ ವರದಾ ಲೇಔಟ್ ನಲ್ಲಿರುವ ಮಹಾಲಕ್ಷ್ಮಿ ಅಪಾರ್ಟಮೆಂಟ್ ನಲ್ಲಿ ಕಳೆದ ನ.6 ರಂದು ಪರಾರಿಯಾಗಿದ್ದ. ಅದಕ್ಕೂ ಮುನ್ನ ಆತ ಅಲ್ಲಿ ಬಂದು ತಂಗಿದ್ದ.

ಆತನಿಗೆ ಫ್ಲ್ಯಾಟ್ ಬಾಡಿಗೆ ನೀಡುವ ಮುನ್ನ ಸರಿಯಾಗಿ ತಿಳಿಯಬೇಕಿತ್ತು. ಆತ ಪೊಲೀಸರಿಗೆ ಬೇಕಾಗಿರುವ ಪ್ರಮುಖ ಆರೋಪಿಯಾಗಿದ್ದಾನೆ. ಅವನಿಗೆ ನೀವು ಆಶ್ರಯ ನೀಡಿದ್ದಿರಿ ಎನ್ನುವ ಕಾರಣದಿಂದಾಗಿ ಶಹಾಪೂರದ ಶಂಕರ್ ಗೌಡ ಯಾಳವಾರ್, ಆರ್ ಡಿ ಪಾಟೀಲ್ ಗೆ ಫ್ಲ್ಯಾಟ್ ಬಾಡಿಗೆ ನೀಡಿದ ತಪ್ಪಿಗೆ ಬಂಧನಕ್ಕೊಳಗಾಗಿದ್ದಾರೆ.

ಅದೇ ರೀತಿ ಅಪಾರ್ಟ್‌ ಮೆಂಟ್ ನ ವ್ಯವಸ್ಥಾಪಕ ದಿಲೀಪ್ ಪವಾರ್ ಸಹ ಅರೆಸ್ಟ್ ಮಾಡಲಾಗಿದೆ.

ಆರ್ ಡಿ ಪಾಟೀಲ್ ನಿಂದ ಹತ್ತು ಸಾವಿರ ರೂ. ಅಡ್ವಾನ್ಸ್ ಪಡೆದು, ಆ ಹಣ ಫ್ಲ್ಯಾಟ್ ಮಾಲೀಕ ಶಂಕರ್ ಗೌಡಗೆ ಕೊಟ್ಟಿದ್ದರು ಎಂದು ಗೊತ್ತಾಗಿದೆ.

Advertisement

ಕೆಇಎ ಪರೀಕ್ಷೆ ಆಕ್ರಮದಲ್ಲಿ ಆರ್ ಡಿ ಪಾಟೀಲ್ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾಗ ಆತ, ಇದೇ ಅಪಾರ್ಟ್‌ ಮೆಂಟ್ ನಲ್ಲೆ ಇದ್ದ. ನವೆಂಬರ್ 5 ರಂದು ರಾತ್ರಿ 11 ಗಂಟೆಗೆ ಮಹಾಲಕ್ಷ್ಮೀ ಅಪಾರ್ಟ್‌ ಮೆಂಟ್ ಗೆ ಆಗಮಿಸಿ ರಾತ್ರಿ ಅಲ್ಲಿಯೇ ಅಡಗಿದ್ದ.

ಮರು ದಿನ ಮದ್ಯಾಹ್ನ ಪೊಲೀಸರು ಆಗಮಿಸುವ ಮಾಹಿತಿ ಸಿಕ್ಕ ತಕ್ಷಣ ಹಿಂಬದಿಯ ಕಾಂಪೌಂಡ್ ಹಾರಿ ಪರಾರಿಯಾಗಿದ್ದ. ಇದೆಲ್ಲವೂ ಪಕ್ಕದ ಕಟ್ಟಡದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next