Advertisement
ಗುರುವಾರ ಬೆಳಗ್ಗೆ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ರಾಜ್ಯಪಾಲರಿಗೆ ತಮ್ಮ ನಿರ್ಧಾರ ತಿಳಿಸಿದ್ದಾರೆ. ಈ ಪ್ರಸ್ತಾವನೆಯನ್ನು ಅಂಗೀಕರಿಸಿರುವ ರಾಜ್ಯಪಾಲ ಇ.ಎಸ್.ಎಲ್.ನರಸಿಂಹನ್ ಅವರು, ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಚಂದ್ರಶೇಖರ್ ರಾವ್ಗೆ ಸೂಚಿಸಿದ್ದಾರೆ. ಜತೆಯಲ್ಲೇ ವಿಧಾನಸಭೆ ವಿಸರ್ಜಿಸಿರುವ ನಿರ್ಧಾರವನ್ನು ಕೇಂದ್ರ ಗೃಹ ಇಲಾಖೆ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೂ ತಲುಪಿಸಲಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಡಿಸೆಂಬರ್ನಲ್ಲಿ ನಡೆಯಲಿರುವ ನಾಲ್ಕು ರಾಜ್ಯಗಳ ಚುನಾವಣೆ ಜತೆಗೆಅಥವಾ ಮುಂದಿನ ಮಾರ್ಚ್ನೊಳಗೆ ತೆಲಂಗಾಣದಲ್ಲೂ ಎಲೆಕ್ಷನ್ ನಡೆಸುವ ಸಾಧ್ಯತೆ ಇದೆ.
Related Articles
ಚುನಾವಣೆ ನಡೆದು ಹೆಚ್ಚು ಸ್ಥಾನ ಗಳಿಸಿದರೆ ಆಗ ಖಚಿತವಾದ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಚಿಂತನೆಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ.
Advertisement
ಯಾರಿಗೆ ನಷ್ಟ?: ತೆಲಂಗಾಣದಲ್ಲಿ ಬಿಜೆಪಿ ಪ್ರಭಾವ ಅಷ್ಟಕ್ಕಷ್ಟೇ. ಆದರೆ ಕಾಂಗ್ರೆಸ್ ಮತ್ತು ಟಿಡಿಪಿ ಪ್ರಮುಖ ವಿರೋಧಪಕ್ಷಗಳು. ಈಗ ಅಭ್ಯರ್ಥಿಗಳ ಘೋಷಣೆ ಮಾಡಿ ಕ್ಷೇತ್ರಗಳಲ್ಲಿ ಕೆಲಸ ಮಾಡಲು ನಿಯೋಜಿಸುವ ಮೂಲಕ ಕಾಂಗ್ರೆಸ್ ಮತ್ತು ಟಿಡಿಪಿಗೆ ಸಿದಟಛಿತೆಗೂ ಅವಕಾಶ ಮಾಡಿಕೊಡದ ಆಲೋಚನೆ ಕೆಸಿಆರ್ ಅವರದ್ದು.
6 ಅದೃಷ್ಟದ ಸಂಖ್ಯೆ: ತೆಲಂಗಾಣ ಸಿಎಂ ಚಂದ್ರಶೇಖರರಾವ್ ಅವರಿಗೂ 6ಕ್ಕೂ ಅವಿನಾಭಾವ ನಂಟಿದೆ. ಇದುವರೆಗೂ ಜ್ಯೋತಿಷಿಗಳನ್ನು ಕೇಳದೇ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದ ಕೆಸಿಆರ್. ವಿಧಾನಸಭೆ ವಿಸರ್ಜಿಸಿದ್ದು ಇದೇ 6 ರಂದು. ಏಕೆಂದರೆ, ಕಳೆದ 2 ರಂದೇ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಬೇಕಿತ್ತಾದರೂ, ಜ್ಯೋತಿಷಿಗಳ ಸಲಹೆಯಂತೆ 6ನೇ ತಾರೀಕಿಗೆ ಮುಂದೂಡಿದ್ದರು.