Advertisement

ಕೆಸಿಆರ್‌ ಸ್ವಗ್ರಾಮದ ಕುಟುಂಬಗಳಿಗೆ 10 ಲಕ್ಷ ರೂ.!

01:16 AM Jul 23, 2019 | mahesh |

ಹೈದರಾಬಾದ್‌: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ತನ್ನ ಗ್ರಾಮದಲ್ಲಿನ ಎಲ್ಲ 2 ಸಾವಿರ ಕುಟುಂಬ ಗಳಿಗೂ ತಲಾ 10 ಲಕ್ಷ ರೂ. ನೀಡಲು ನಿರ್ಧರಿಸಿದ್ದಾರೆ. ಸಿದ್ದಿಪೇಟೆ ಜಿಲ್ಲೆಯ ಚಿಂತಮಡಕ್ಕ ಗ್ರಾಮದಲ್ಲಿ ಸದ್ಯ 2 ಸಾವಿರ ಕುಟುಂಬಗಳಿವೆ. ಇದೇ ಗ್ರಾಮದಲ್ಲಿ ಕೆಸಿಆರ್‌ ಜನಿಸಿದ್ದು, ಸೋಮವಾರ ಇಲ್ಲಿಗೆ ಅವರು ಭೇಟಿ ನೀಡಿದ್ದರು. ಈ ವೇಳೆ ಕೆಸಿಆರ್‌ ಈ ಘೋಷಣೆ ಮಾಡಿದ್ದಾರೆ. ಇದಲ್ಲದೇ, ಪ್ರತಿ ಕುಟುಂಬಕ್ಕೆ ಮನೆ ನಿರ್ಮಾಣ ಮತ್ತು ಇಡೀ ಗ್ರಾಮಕ್ಕೆ ಒಳಚರಂಡಿ ವ್ಯವಸ್ಥೆಯನ್ನು ಮಾಡಿ ಕೊಡುವು ದಾಗಿಯೂ ಅವರು ಘೋಷಿಸಿದ್ದಾರೆ.

Advertisement

ಮುಂದಿನ 6 ತಿಂಗಳಲ್ಲಿ ಎಲ್ಲ ಕೆಲಸವನ್ನೂ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದ ಅವರು, ಈ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸಲಾಗುತ್ತದೆ ಎಂದಿದ್ದಾರೆ. ಆರು ತಿಂಗಳ ಅನಂತರ ಆಗಮಿಸಿ ಎಲ್ಲ ಯೋಜನೆಗಳನ್ನೂ ಉದ್ಘಾಟಿಸುವುದಾಗಿ ಅವರು ಹೇಳಿದ್ದಾರೆ. ಇಲ್ಲಿ ಕಲ್ಯಾಣ ಮಂಟಪ, ರಸ್ತೆ ಹಾಗೂ ಕುಡಿಯುವ ನೀರು ಪೂರೈಕೆ ಯೋಜನೆ ಯನ್ನೂ ಜಾರಿಗೊಳಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next