Advertisement

Cauvery: ಡಿಎಂಕೆ ವಿರುದ್ಧ ಪಳನಿ ಕಿಡಿ

11:10 PM Oct 01, 2023 | Team Udayavani |

ಚೆನ್ನೈ: ಕಾವೇರಿ ವಿವಾದದ ಕಿಚ್ಚು ತಮಿಳು ನಾಡು ರಾಜ್ಯ ರಾಜಕಾರಣದಲ್ಲೂ ಬಿಸಿ ಹೆಚ್ಚಿಸಿದ್ದು, ಆಡಳಿತಾರೂಢ ಡಿಎಂಕೆ ಸರಕಾರವನ್ನು ವಿಪಕ್ಷ ಎಐಡಿಎಂಕೆ ತರಾಟೆ ತೆಗೆದುಕೊಂಡಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ಗೆ ರಾಜ್ಯದ ಪ್ರಜೆಗಳ ಬಗ್ಗೆ ಕಾಳ ಜಿಯೇ ಇಲ್ಲವೆಂದು ವಿಪಕ್ಷ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಆರೋಪಿಸಿದ್ದಾರೆ.

Advertisement

ಸ್ಟಾಲಿನ್‌ ಮತ್ತವರ ಕುಟುಂಬಸ್ಥರು ನಡೆಸುತ್ತಿರುವ ವ್ಯವಹಾರಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕರ್ನಾಟಕದ ಕಾಂಗ್ರೆಸ್‌ ಸರಕಾರಕ್ಕೆ ಡಿಎಂಕೆ ಸರಕಾರ ಬೆಂಬಲ ನೀಡುತ್ತಿದೆ. ಸಿಎಂ ಸ್ಟಾಲಿನ್‌ ಯಾರಧ್ದೋ ಕೈಗೊಂಬೆಯಂತೆ ವರ್ತಿಸುತ್ತಿ ದ್ದಾರೆ. ಅವರಿಗೆ ರಾಜ್ಯದ ಹಿತದ ಬಗ್ಗೆ ದೂರದೃಷ್ಟಿಯೇ ಇಲ್ಲ. ಸರಕಾರ ಕಾವೇರಿ ನೀರಿನ ಬಗ್ಗೆ ನೀಡಿರುವ ಭರವಸೆ ನಂಬಿಕೊಂಡು 5 ಲಕ್ಷ ಎಕರೆ ಜಮೀನಿನಲ್ಲಿ ಬೆಳೆ ಹಾಕಲಾಗಿದೆ. ಆದರೆ ಸರಕಾರ ಗಾಢ ನಿದ್ರೆಯಲ್ಲಿದೆ ಎಂದು ಕಿಡಿಕಾರಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next