Advertisement

ಹೊಸಬರ ಕೌಟಿಲ್ಯನಿಗೆ ಮೆಚ್ಚುಗೆ

03:01 PM Aug 29, 2022 | Team Udayavani |

ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಕೌಟಿಲ್ಯ’ ಚಿತ್ರ ಆ. 26ರಂದು ರಾಜ್ಯಾದ್ಯಂತ ಸುಮಾರು 50ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಕಂಡಿದೆ.

Advertisement

ಇನ್ನು ಮನಿ ಗ್ಯಾಂಬ್ಲಿಂಗ್‌ ಸುತ್ತ ನಡೆಯುವ ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಕೌಟಿಲ್ಯ’ ಸಿನಿಮಾದಲ್ಲಿ ಅರ್ಜುನ್‌ ರಮೇಶ್‌, ಪ್ರಿಯಾಂಕಾ ಚಿಂಚೋಳಿ, ನೀನಾಸಂ ಅಶ್ವಥ್‌, ರಘು ಪಾಂಡೇಶ್ವರ, ಹರಿಣಿ, ಸೂರ್ಯ ಪ್ರವೀಣ್‌ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸದ್ಯ ಬಿಡುಗಡೆಯಾಗಿರುವ “ಕೌಟಿಲ್ಯ’ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೊಸಬರ ಪ್ರಯತ್ನದ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದೆ. “ಶ್ರೀ ಕಲ್ಲೂರು ಆಂಜನೇಯ ಮೂವೀಸ್‌’ ಬ್ಯಾನರ್‌ನಲ್ಲಿ ವಿಜೇಂದ್ರ ನಿರ್ಮಿಸಿರುವ, “ಕೌಟಿಲ್ಯ’ ಚಿತ್ರಕ್ಕೆ ಪ್ರಭಾಕರ ಶೇರ್‌ಖಾನೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next