Advertisement

Kaup: ಸ್ಕೂಟಿಗೆ ಕಾರು ಢಿಕ್ಕಿ; ಸವಾರನಿಗೆ ಗಾಯ

08:58 PM Oct 20, 2024 | Team Udayavani |

ಕಾಪು: ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಸ್ಕೂಟಿಗೆ ಕಾರು ಢಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ ಅ. 19ರಂದು ಕಾಪುವಿನಲ್ಲಿ ನಡೆದಿದೆ.

Advertisement

ಮೂಡುತೋನ್ಸೆ ನಿವಾಸಿ ಮಿಥುನ್‌ (42) ಗಾಯಾಳು. ಮಂಗಳೂರಿಗೆ ಹೋಗಲು ಮೂಡುತೊನ್ಸೆಯಿಂದ ಹೊರಟು ಉಡುಪಿ – ಮಂಗಳೂರು ಏಕಮುಖ ರಸ್ತೆಯ ರಾ.ಹೆ.66ರಲ್ಲಿ ಕಾಪು ಮಂದಾರ ರೆಸಿಡೆನ್ಸಿ ಎದುರು ತೆರಳುತ್ತಿದ್ದಾಗ ಕಾರು ಚಾಲಕ ಯಾವುದೇ ಸೂಚನೆ ನೀಡದೇ ಕಾರನ್ನು ಎಡಬದಿಗೆ ತಿರುಗಿಸಿದ್ದು, ಕಾರಿನ ಹಿಂಬದಿಯಿಂದ ಬರುತ್ತಿದ್ದ ಸ್ಕೂಟಿಗೆ ಢಿಕ್ಕಿ ಹೊಡೆದಿದೆ.

ಈ ವೇಳೆ ಸವಾರ ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು ಬಲಕಾಲು, ಎದೆಯ ಬಲಬದಿಯಲ್ಲಿ ಗುದ್ದಿದ ನೋವು ಉಂಟಾಗಿದೆ. ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕನ ಸಹಾಯದಿಂದ ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next