Advertisement

Kundapura: ಕಾರು ಢಿಕ್ಕಿಯಾಗಿ ದನ ಸಾವು; ಕಾರು ಜಖಂ

09:00 PM Oct 18, 2024 | Team Udayavani |

ಕುಂದಾಪುರ: ತ್ರಾಸಿ ಸಮೀಪದ ಮೊವಾಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದನವೊಂದು ಕಾರಿಗೆ ಅಡ್ಡ ಬಂದು ಢಿಕ್ಕಿಯಾಗಿದ್ದು, ಪರಿಣಾಮ ದನ ಸಾವನ್ನಪ್ಪಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಈ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

Advertisement

ಉಡುಪಿ ಮೂಲದ ಬಾಡಿಗೆ ಕಾರು ಇದಾಗಿದ್ದು, ಬಾಡಿಗೆಗೆಂದು ಮುರ್ಡೇಶ್ವರಕ್ಕೆ ಹೋಗಿ ವಾಪಸು ಮರವಂತೆ ಬೀಚ್‌ ದಾಟಿ ತ್ರಾಸಿ ಬಳಿ ಬರುತ್ತಿದ್ದಂತೆ ಈ ಅವಘಡ ಸಂಭವಿಸಿದೆ. ತ್ರಾಸಿಯಿಂದ ಮುಳ್ಳಿಕಟ್ಟೆಯವರೆಗಿನ ಹೆದ್ದಾರಿಯಲ್ಲಿ ಬೀದಿ ದೀಪ ಇಲ್ಲದೇ ಇರುವುದರಿಂದ ಆಗಾಗ್ಗೆ ಇಂತಹ ಅಪಘಾತಗಳು ಸಂಭವಿಸುತ್ತಿದ್ದು, ಇದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಇದಲ್ಲದೆ ಇಲ್ಲಿನ ರಸ್ತೆ ಡಿವೈಡರ್‌ನಲ್ಲಿ ಹುಲ್ಲು ಬೆಳೆದಿದ್ದು, ಅದನ್ನು ತಿನ್ನಲು ದನಗಳು ಬರುತ್ತಿರುತ್ತವೆ.

ರಾತ್ರಿ ವೇಳೆಗೆ ರಸ್ತೆಗೆ ಬರುವ ದನಗಳ ಬಗ್ಗೆ ವಾಹನ ಚಾಲಕರಿಗೆ ಗೊತ್ತಾಗದೆ ಢಿಕ್ಕಿ ಸಂಭವಿಸುತ್ತಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next