Advertisement

Udupi: ಕಾರುಗಳ ಢಿಕ್ಕಿ; ಮೂವರಿಗೆ ಗಾಯ

08:47 PM Sep 29, 2024 | Team Udayavani |

ಉಡುಪಿ: ಕಾರುಗಳ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.

Advertisement

ಮೈಸೂರಿನ ರಾಮಚಂದ್ರ ಹಾಗೂ ಅವರ ಸಂಬಂಧಿಕ ಸಾಯಿಪ್ರಸಾದ್‌ ಅವರು ಶ್ರೀಕೃಷ್ಣ ಮಠಕ್ಕೆ ದೇವರ ದರ್ಶನ ಮಾಡಲು ಸ್ನೇಹಿತ ಗುರುದತ್‌ ಅವರ ಕಾರಿನಲ್ಲಿ ಮಂಗಳೂರಿನಿಂದ ಉಡುಪಿಗೆ ಹೊರಟಿದ್ದರು.

ಈ ವೇಳೆ ಕಿನ್ನಿಮುಲ್ಕಿ ಕಡೆಯಿಂದ ಉಡುಪಿ ಸಿಟಿ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಗುರುದತ್‌ ಅವರು ಅವರ ಕಾರನ್ನು ಅತೀವೇಗದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಡಿವೈಡರ್‌ ಮೇಲೆ ಚಲಿಸಿ ವಿದ್ಯುತ್‌ ದೀಪ ಅಳವಡಿಸಿದ ಕಂಬಕ್ಕೆ ಢಿಕ್ಕಿ ಹೊಡೆದಿದ್ದರು.

ಪರಿಣಾಮ ರಾಮಚಂದ್ರ, ಸಾಯಿಪ್ರಸಾದ್‌ ಹಾಗೂ ಗುರುದತ್‌ ಅವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next