Advertisement

ಕಾಪು : ನಾಡೋಜ ಡಾ|ಜಿ. ಶಂಕರ್‌ ದಂಪತಿಗೆ ಸಮ್ಮಾನ

10:15 PM Apr 22, 2019 | sudhir |

ಕಾಪು : ಕಾಪು ಕೋಟ್ಯಾನ್‌ಕಾರ್‌ ಮೂಲಸ್ಥಾನದಲ್ಲಿ ಸಮುದಾಯ ಭವನ ಮತ್ತು ಭೋಜನ ಶಾಲೆ ನಿರ್ಮಾಣಕ್ಕೆ ಸರಕಾರದ ಅನುದಾನ ದೊರಕಿಸಿ ಕೊಡಲು ಸಹಕರಿಸಿ, ವೈಯಕ್ತಿಕ ದೇಣಿಗೆಯನ್ನು ನೀಡಿದ ಉಡುಪಿ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್‌ ಮತ್ತು ಶಾಲಿನಿ ಜಿ. ಶಂಕರ್‌ ಅಂಬಲಪಾಡಿ ದಂಪತಿಯನ್ನು ಸಮ್ಮಾನಿಸಲಾಯಿತು.

Advertisement

ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌, ಪಡುಬಿದ್ರಿಬೀಡು ರತ್ನಾಕರ ರಾಜ್‌ ಅರಸರು, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಉದ್ಯಮಿಗಳಾದ ಅಪ್ಪು ಕೋಟ್ಯಾನ್‌ ಶಿವಮೊಗ್ಗ, ಹರಿಯಪ್ಪ ಕೋಟ್ಯಾನ್‌ ಮಲ್ಪೆ, ನಾಟಿ ವೈದ್ಯ ಶ್ರೀನಿವಾಸ ಪೂಜಾರಿ ನಿಟ್ಟೂರು, ಪುರಸಭಾ ಸದಸ್ಯೆ ಮಮತಾ ಕುಶ ಸಾಲ್ಯಾನ್‌, ಕಟ್ಟಡ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಂದರ ಸಿ. ಕೋಟ್ಯಾನ್‌, ಉಪಾಧ್ಯಕ್ಷ ಸುಧರ್ಮ ಕೋಟ್ಯಾನ್‌ ಉದ್ಯಾವರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next