Advertisement

ಗ್ರಾ. ಪಂ. ಚುನಾವಣೆಗೆ ಸಜ್ಜಾಗಲು ಕಾರ್ಯಕರ್ತರಿಗೆ ಸೊರಕೆ ಕರೆ

11:21 PM May 13, 2019 | Sriram |

ಕಾಪು: ಕಾಪು ಬ್ಲಾಕ್‌ ಕಾಂಗ್ರೆಸ್‌ ಸಮಿತಿ (ದಕ್ಷಿಣ)ಯ ಕಾರ್ಯಕರ್ತರ ಸಭೆಯು ಮೇ 11ರಂದು ಇಲ್ಲಿನ ರಾಜೀವ ಭವನದಲ್ಲಿ ನಡೆಯಿತು.

Advertisement

ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಲೋಕಸಭಾ ಚುನಾವಣೆಯಲ್ಲಿ ದುಡಿದ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆಯನ್ನು ಸಲ್ಲಿಸಿ, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರುವುದು ಖಚಿತವಾಗಿದೆ. ರಾಹುಲ್‌-ಪ್ರಿಯಾಂಕಾ ಅಲೆಯೆದುರು ಮೋದಿ ಅಲೆ ಇನ್ನಿಲ್ಲದಂತೆ ಮಂಕಾಗಿ ಹೋಗಿದೆ. ಕಾರ್ಯಕರ್ತರು ಇನ್ನಷ್ಟು ಸಕ್ರಿಯರಾಗಿ ಮುಂಬರುವ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿಯೂ ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ನಾವು ಜೊತೆಯಾಗಿ ಕಾಪು ಕ್ಷೇತ್ರದಾದ್ಯಂತ ವಿಜಯ ಪತಾಕೆ ಹಾರಿಸೋಣ ಎಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರ್‌, ಉಪಾಧ್ಯಕ್ಷ ಕಾಪು ದಿವಾಕರ್‌ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.ಪಕ್ಷದ ಮುಖಂಡರಾದ ಸರಸು ಬಂಗೇರ, ಲೀನ ಮಥಾಯಸ್‌, ದೇವಪುತ್ರ ಕೋಟ್ಯಾನ್‌, ಗೋಪಾಲ್‌ ಪೂಜಾರಿ, ವಿಶ್ವಾಸ್‌ ಅಮೀನ್‌, ಮೇಲ್ವಿನ್‌ ಡಿ ಸೋಜ, ಗಣೇಶ್‌ ಕೋಟ್ಯಾನ್‌, ಫಾರೂಕ್‌ ಚಂದ್ರನಗರ, ಎಚ್‌. ಅಬ್ದುಲ್ಲಾ, ಪ್ರಭಾ ಶೆಟ್ಟಿ, ಪ್ರಭಾವತಿ ಸಾಲಿಯಾನ್‌, ಕೆ. ಎಚ್‌.ಉಸ್ಮಾನ್‌, ಅಬ್ದುಲ್‌ ರಹಿಮಾನ್‌ ಕನ್ನಂಗರ್‌, ಹರೀಶ್‌ ನಾಯಕ್‌, ನಾಗೇಶ್‌ ಸುವರ್ಣ ಮತ್ತು ಪುರಸಭೆಯ ಸದಸ್ಯರು, ತಾ. ಪಂ, ಗ್ರಾ.ಪಂ. ಸದಸ್ಯರು, ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಅಮೀರ್‌ ಮೊಹಮ್ಮದ್‌ ಕಾಪು ಸ್ವಾಗತಿಸಿದರು. ದಿನೇಶ್‌ ಕೋಟ್ಯಾನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next