Advertisement

ಕ್ಯಾನಹಳ್ಳಿ ಚೇತನ್‌ ಮನೆಯಲ್ಲಿ ಗಾಢಮೌನ

02:42 PM Oct 30, 2021 | Team Udayavani |

ಸಕಲೇಶಪುರ: ಹೆಸರಾಂತ ಚಿತ್ರನಟ ಪುನೀತ್‌ ರಾಜ್‌ ಕುಮಾರ್‌ರವರ ನಿಧನದಿಂದ ತಾಲೂಕಿನ ಕ್ಯಾನಹಳ್ಳಿ ಗ್ರಾಮದ ಕಾಫಿ ಬೆಳೆಗಾರ ಚೇತನ್‌ರವರ ಕುಟುಂಬ ದು:ಖದಲ್ಲಿ ಮುಳುಗಿದೆ. ಪುನೀತ್‌ ರಾಜ್‌ಕುಮಾರ್‌ರವರ ಪತ್ನಿ ಅಶ್ವಿ‌ನಿ ಮೂಲತಃ ಚಿಕ್ಕಮಗಳೂರುನವರಾಗಿದ್ದು, ಅಶ್ವಿ‌ನಿರವರ ತಂದೆ ರೇವನಾಥ್‌ ಚಿಕ್ಕಮಗಳೂರು ಜಿಲ್ಲೆಯ ಬಾಗಮನೆ ಗ್ರಾಮದವರು. ತಾಯಿ ವಿಜಯ ಮೂಲತಃ ಹಾಸನದ ಬೇಲೂರು ತಾಲೂಕಿನ ಕುಶಾವರ ಗ್ರಾಮದವರು.

Advertisement

ಸಕಲೇಶಪುರ ತಾಲೂಕಿನ ಕ್ಯಾನಹಳ್ಳಿ ಗ್ರಾಮದ ದಿ. ರುದ್ರೇಗೌಡರ ಕುಟುಂಬದ ಜತೆ ನೆಂಟಸ್ಥನ ಹೊಂದಿದ್ದು, ಈ ಎರಡು ಕುಟುಂಬಗಳು ಹಲವು ವರ್ಷಗಳಿಂದ ಸಂಪರ್ಕದಲ್ಲಿದ್ದವು. ಕೆಲವು ವರ್ಷಗಳ ಹಿಂದೆ ಚಿಕ್ಕಮಗಳೂರಿನಲ್ಲಿ ನಡೆದ ದಿ. ರುದ್ರೇಗೌಡರ ಪುತ್ರ ಚೇತನ್‌ ರವರ ಮದುವೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ಹಾಗೂ ಪತ್ನಿ ಆಶ್ವಿ‌ನಿ ಭಾಗಿಯಾಗಿದ್ದಲ್ಲದೆ ಅಲ್ಲದೆ ಕ್ಯಾನಹಳ್ಳಿ ಗ್ರಾಮದಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಮಲೆನಾಡಿನ ಸುಗ್ಗಿಗೆ ನರ್ತನ ಮಾಡಿದ್ದರು.

ಇದನ್ನೂ ಓದಿ:- ಕುಡಿಯುವ ನೀರಿನ ಯೋಜನೆ ಜಾರಿಗೆ ಕ್ರಮ

ಅಲ್ಲದೆ ಚಲನಚಿತ್ರವೊಂದರ ಶೂಟಿಂಗ್‌ಗೆ ಬಂದಾಗ ಚೇತನ್‌ರವರ ಮನೆಗೆ ಭೇಟಿ ನೀಡಿ ಕಾಲ ಕಳೆದಿದ್ದರು. ಕಳೆದ ವರ್ಷ ಕೋವಿಡ್‌ನಿಂದಾಗಿ ತಂದೆಯನ್ನು ರುದ್ರೇಗೌಡರನ್ನು ಕಳೆದುಕೊಂಡಿದ್ದ ಚೇತನ್‌ ಇದೀಗ ಪುನೀತ್‌ ರವರ ನಿಧನದಿಂದ ಅವರ ಕುಟುಂಬದಲ್ಲಿ ದುಃಖ ಆವರಿಸಿದೆ.

“ಪುನೀತ್‌ರವರ ಅಕಾಲಿಕ ಮರಣ ನಮಗೆ ಅಪಾರ ದುಃಖ ತಂದಿದೆ. ಸ್ಟಾರ್‌ ನಟರಾಗಿದ್ದರೂ ಹಮ್ಮು ಬಿಮ್ಮು ತೋರದೆ ಸರಳವಾಗಿರುತ್ತಿದ್ದರು. ಅವರ ಅಂತಿಮ ದರ್ಶನ ಮಾಡಲು ಬೆಂಗಳೂರಿಗೆ ತೆರಳುತ್ತಿದ್ದೇವೆ.” – ಚೇತನ್‌, ಕ್ಯಾನಹಳ್ಳಿ ಗ್ರಾಮದ ಕಾಫಿ ಬೆಳೆಗಾರ.

Advertisement
Advertisement

Udayavani is now on Telegram. Click here to join our channel and stay updated with the latest news.

Next