Advertisement

ಕೌಡೂರು: ಮನೆಯಿಂದ ಚಿನ್ನಾಭರಣ, ನಗದು ಕಳವು

05:20 PM Feb 06, 2023 | Team Udayavani |

ಕಾರ್ಕಳ: ಕೌಡೂರಿನ ಕಡ್ತಲ ನಿವಾಸಿ ಮಹಮ್ಮದ್‌ ಇರ್ಫಾನ್‌ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನ ಹಾಗೂ ನಗದು ಕಳವುಗೈದ ಘಟನೆ ಫೆ.3ರಂದು ನಡೆದಿದೆ.

Advertisement

ಮುಹಮ್ಮದ್‌ ಇರ್ಫಾನ್‌ ಎಂಬವರು ಕಡ್ತಲ ಎಂಬಲ್ಲಿಗೆ ಜಾತ್ರೆಗೆ ವ್ಯಾಪಾರ ಮಾಡಲು ಹೋಗಿದ್ದು ಪತ್ನಿ ಬೈಲೂರಿನಲ್ಲಿರುವ ತಾಯಿ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆಯಾರೋ ಕಳ್ಳರು ಮನೆಯ ಮುಂದಿನ ಬಾಗಿಲನ್ನು ಮುರಿದು ಒಳಪ್ರವೇಶಿಸಿ ಒಳಗೆ ಬೆಡ್ರೂಮಿನಲ್ಲಿದ್ದ ಸ್ಟೀಲ್‌ ಕಾಣಿಕೆ ಡಬ್ಬಿಯ ಬೀಗವನ್ನು ಮುರಿದು ಅದರಲ್ಲಿದ್ದ ನಗದು ರೂಪಾಯಿ 4 ಸಾವಿರ ಹಾಗೂ ಇನ್ನೊಂದು ಬೆಡ್‌ ರೂಮಿನ ಒಳಗೆ ಅಲ್ಮೆರಾದ ಲಾಕರ್ನ ಬೀಗವನ್ನು ಮುರಿದು ಒಳಗೆ ಇದ್ದ 5 ಪವನ್ನ ಚಿನ್ನದ ಕರಿಮಣಿ ಸರ-1, 6 ಪವನ್‌ ತೂಕದ ಚಿನ್ನದ ಗಿಡ್ಡ ನೆಕ್ಲೆಸ್‌ -1, 2 ಪವನ್‌ ತೂಕದ ಚಿನ್ನದ ಬಳೆ 2, 4 ಪವನ್‌ ತೂಕದ ಚಿನ್ನದ ಬ್ರಾಸ್ಲೆಟ್ 1, 5 ಪವನ್‌ ತೂಕದ ಚಿನ್ನದ ಉದ್ದ ನೆಕ್ಲೆಸ್‌ 1, 1 ಪವನ್‌ ತೂಕದ ಮಗುವಿನ ಚಿನ್ನದ ಚೈನ್‌ 1, 1ಪವನ್‌ ತೂಕದ ಮಗುವಿನ ಚಿನ್ನದ ಕರಿಮಣಿ ಬಳೆಗಳು 2 ಮತ್ತು 1 ಪವನ್‌ ತೂಕದ ಚಿನ್ನದ ಉಂಗುರ 3, 1 ಪವನ್‌ ತೂಕದ ಮಗುವಿನ ಚಿನ್ನದ ಬ್ರಾಸ್ಲೆಟ್ 1 ಇವುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಚಿನ್ನಾಭರಗಳ ಒಟ್ಟು ಮೌಲ್ಯ ನಗದು ಸೇರಿ ರೂಪಾಯಿ 6,28,000 ರೂ. ಆಗಿರುತ್ತದೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next