Advertisement

Kattingeri: ಕಾಲೇಜು ವಿದ್ಯಾರ್ಥಿ ನಾಪತ್ತೆ

08:36 PM Sep 25, 2024 | Team Udayavani |

ಶಿರ್ವ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಮೂಡುಬೆಳ್ಳೆ ಕಟ್ಟಿಂಗೇರಿಯ ಮನೆಯಿಂದ ಚೆಂಡೆ ಬಾರಿಸಲು ಹೋಗುತ್ತೇನೆಂದು ಹೇಳಿ ಹೊರಟು ಹೋದ ಕಾಲೇಜು ವಿದ್ಯಾರ್ಥಿಯೋರ್ವ ಕಾಣೆಯಾಗಿದ್ದಾನೆ.

Advertisement

ಕಟ್ಟಿಂಗೇರಿ ಭೂತಬೆಟ್ಟು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ಗಣೇಶ್‌ ಪುರುಷ ಅವರ ಪುತ್ರ ಧನುಷ್‌ ಜಿ. ಪುರುಷ (20) ನಾಪತ್ತೆಯಾದ ವಿದ್ಯಾರ್ಥಿ. ಪಡುಬೆಳ್ಳೆ ಪಾಜಕದ ಬಳಿಯ ಖಾಸಗಿ ಕಾಲೇಜಿನಲ್ಲಿ 2ನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಈತ ಸೆ. 23ರಂದು ಬೆಳಗ್ಗೆ 7 ಗಂಟೆಗೆ ಮನೆಯಿಂದ ಹೊರಟು ಹೋಗಿದ್ದು, ವಾಪಸು ಮನೆಗೆ ಬಂದಿರಲಿಲ್ಲ. ಆತನ ಬಗ್ಗೆ ಸಹಪಾಠಿಗಳಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ.

ಆತನ ತಾಯಿ ಪ್ರಮೋದಾ ಪುರುಷ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next