Advertisement

Tipper ಢಿಕ್ಕಿ: ಎಂಬಿಬಿಎಸ್‌ ವಿದ್ಯಾರ್ಥಿ ಸಾವು

08:11 PM Sep 19, 2024 | Team Udayavani |

ಕುಂಬಳೆ: ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಸೆ. 18ರಂದು ರಾತ್ರಿ ಟಿಪ್ಪರ್‌ ಢಿಕ್ಕಿ ಹೊಡೆದು ಎಂ.ಬಿ.ಬಿ.ಎಸ್‌. ವಿದ್ಯಾರ್ಥಿ, ಕಟ್ಟತ್ತಡ್ಕ ಎ.ಕೆ.ಜಿ. ನಗರದ ಮೊಗ್ರಾಲ್‌ ಕೊಪ್ಪಳ ನಿವಾಸಿ ಅಹಮ್ಮದ್‌ ಅವರ ಪುತ್ರ ಎಂ.ಕೆ. ಮೊಹಮ್ಮದ್‌ ರಾಶಿದ್‌ (21) ಸಾವಿಗೀಡಾದರು.

Advertisement

ಎಂ.ಬಿ.ಬಿ.ಎಸ್‌. ದ್ವಿತೀಯ ವರ್ಷ ವಿದ್ಯಾರ್ಥಿಯಾಗಿರುವ ರಾಶಿದ್‌ ಬುಧವಾರ ರಾತ್ರಿ ಬೈಕ್‌ ರಸ್ತೆ ಬದಿ ನಿಲ್ಲಿಸಿ ಮತ್ತೂಂದು ಬದಿಯಲ್ಲಿರುವ ಹೊಟೇಲ್‌ನಿಂದ ಆಹಾರ ಖರೀದಿಸಿ ರಸ್ತೆ ದಾಟುತ್ತಿದ್ದಾಗ ಟಿಪ್ಪರ್‌ ಢಿಕ್ಕಿ ಹೊಡೆದಿದೆ. ರಜೆಯಲ್ಲಿ ಊರಿಗೆ ಬಂದಿದ್ದ ರಾಶಿದ್‌ ಒಂದು ವಾರದ ಹಿಂದೆ ಕೊಯಮುತ್ತೂರಿಗೆ ಮರಳಿದ್ದರು. ವಿಷಯ ತಿಳಿದು ಕೊಲ್ಲಿಯಲ್ಲಿರುವ ತಂದೆ ಅಹಮ್ಮದ್‌ ಊರಿಗೆ ಬಂದಿದ್ದಾರೆ. ರಾಶಿದ್‌ ಅವರ ತಾಯಿ ಸೌದಾ ಅವರ ತಂದೆ ಇಬ್ರಾಹಿಂ ಹಾಜಿ 12 ದಿನಗಳ ಹಿಂದೆ ನಿಧನ ಹೊಂದಿದ್ದರು.

ಈ ಸಂಬಂಧ ನಡೆದ ಕಾರ್ಯಕ್ರಮದಲ್ಲೂ ಮೊಹಮ್ಮದ್‌ ರಾಶಿದ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next