Advertisement

ಕತ್ತಲ್‌ಸಾರ್‌: ರಬ್ಬರ್‌, ಅಡಿಕೆ ತೋಟಕ್ಕೆ ಹಾನಿ

10:28 AM May 21, 2018 | Team Udayavani |

ಬಜಪೆ : ಪಡುಪೆರಾರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕತ್ತಲ್‌ಸಾರ್‌ನಲ್ಲಿ ರವಿವಾರ ಮುಂಜಾನೆ ಗಾಳಿಮಳೆಗೆ ಕೃಷಿಕ ಅಶೋಕ್‌ ಶೇಣವ ಅವರ ರಬ್ಬರ್‌ ಹಾಗೂ ಅಡಿಕೆ ತೋಟಕ್ಕೆ ಹಾನಿಯಾಗಿ ಸುಮಾರು 1 ಲಕ್ಷ ರೂ. ನಷ್ಟವಾಗಿದೆ.

Advertisement

ಗಾಳಿ ಮಳೆಗೆ ರಬ್ಬರ್‌ ತೋಟದಲ್ಲಿರುವ ಕೆಲವು ರಬ್ಬರ್‌ ಮರಗಳು ತುಂಡಾಗಿ ಬಿದ್ದರೆ, ಇನ್ನೂ ಕೆಲವು ಬುಡಮೇಲಾಗಿ ಬಿದ್ದಿವೆ. ಕೆಲವು ಮರಗಳು ಇನ್ನೊಂದು ಮರಕ್ಕೆ ಬಿದ್ದು ಅಪಾರ ಹಾನಿಯಾಗಿದೆ. ಹೆಚ್ಚಿನವು ಸುಮಾರು 12 ವರ್ಷದ ಸುಮಾರು 100 ರಬ್ಬರ್‌ ಮರಗಳು ಈ ಗಾಳಿಗೆ ಸಿಲುಕಿ ಗೆಲ್ಲುಗಳು ತುಂಡಾಗಿ ಬಿದ್ದಿವೆ. ಅಡಿಕೆ ತೋಟದಲ್ಲೂ ತೆಂಗು ಮರಗಳು, ಪಪ್ಪಾಯಿ ಸಹಿತ ವಿವಿಧ ಗಿಡಗಳು ಗಾಳಿಗೆ ಸಿಲುಕಿ ಅಡ್ಡ ಬಿದ್ದಿವೆ.

Advertisement

Udayavani is now on Telegram. Click here to join our channel and stay updated with the latest news.

Next