Advertisement

ಕಾಟಿಪಳ್ಳ ದೀಪಕ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದ ಪಿಂಕಿ ನವಾಝ್ ಮೇಲೆ ಮಾರಣಾಂತಿಕ ಹಲ್ಲೆ

07:21 PM Feb 10, 2021 | Team Udayavani |

ಕಾಟಿಪಳ್ಳ: ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಹಾಗೂ ಕಾಟಿಪಳ್ಳದ ದೀಪಕ್ ಹತ್ಯೆ ಕೇಸಿನಲ್ಲಿ ಆರೋಪಿಯಾಗಿದ್ದ ಪಿಂಕಿ ನವಾಝ್ ನನ್ನು ದುಷ್ಕರ್ಮಿಗಳ ತಂಡ ಮಾರಕಾಯುಧಗಳಿಂದ ಕಡಿದು ಪರಾರಿಯಾಗಿದೆ.

Advertisement

ಕಾಟಿಪಳ್ಳ ಬಳಿ ಒಳರಸ್ತೆಯೊಂದರಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಕಡಿದು ಪರಾರಿಯಾಗಿದೆ.ಪಿಂಕಿ ನವಾಜ್ ನ ಸ್ಥಿತಿ ಗಂಭೀರವಾಗಿದೆ.

ಯಾರೋ ಫೋನ್ ಮಾಡಿ ಸಮೀಪದಲ್ಲೇ ಆಗುತ್ತಿರುವ ಲೇ ಔಟ್ ಬಳಿ ಮಾತನಾಡಲಿಕ್ಕಿದೆ ಎಂದು ಕರೆದಿದ್ದು , ಸ್ವಿಪ್ಟ್ ಕಾರಿನಲ್ಲಿ ಬಂದ ನಾಲ್ವರು ಏಕಾಏಕಿ ಈತನ ಮೇಲೆ ದಾಳಿ ಮಾಡಿದ್ದಾರೆ.ಈ ಹಿಂದೆ ಜತೆಗಿದ್ದವರೇ ಈ ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.ಗಂಭೀರ ಸ್ಥಿತಿಯಲ್ಲಿ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next