Advertisement

ಕಟೀಲು ಮೇಳದಿಂದ ಹೊರಬಿದ್ದರೆ ಪಟ್ಲ ಸತೀಶ್ ಶೆಟ್ಟರು? ಏನಿದು ಪ್ರಸಂಗ

09:48 AM Nov 24, 2019 | keerthan |

ಕಟೀಲು: ಕರಾವಳಿಯ ಗಂಡುಕಲೆ ಯಕ್ಷಗಾನದ ಪ್ರಸಿದ್ಧ ಮೇಳವಾದ ಕಟೀಲು ಮೇಳದಿಂದ ಸ್ಟಾರ್ ಭಾಗವತ ಪಟ್ಲ ಸತೀಶ್ ಶೆಟ್ಟರನ್ನು ಕೈಬಿಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

Advertisement

ಕಟೀಲು ಯಕ್ಷಗಾನ ಮೇಳಗಳ ಈ ಋತುವಿನ ತಿರುಗಾಟದ ಮೊದಲ ಯಕ್ಷಗಾನವನ್ನು ಶುಕ್ರವಾ ಕಟೀಲು ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು. ಯಕ್ಷಗಾನದ ನಡೆಯುತ್ತಿದ್ದ ಸಮಯದಲ್ಲಿ ಭಾಗವತಿಕೆ ನಡೆಸಲು ಬಂದ ಪಟ್ಲ ಸತೀಶ್ ಶೆಟ್ಟಿಯವರನ್ನು ಎಬ್ಬಿಸಲಾಗಿತ್ತು. ನಂತರ ಮತ್ತೊಬ್ಬರು ಅವರ ಜಾಗದಲ್ಲಿ ಭಾಗವತಿಕೆ ಮುಂದುವರಿಸಿದ್ದರು.

ಇದೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದ್ದು, ಯಕ್ಷಗಾನ ಪ್ರಿಯರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕಟೀಲು ಮೇಳದಲ್ಲಿ ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಬೆಳವಣಿಗೆಗಳ ಕಾರಣದಿಂದ ಪಟ್ಲ ಸತೀಶ್ ಶೆಟ್ಟಿಯವರನ್ನು ಮೇಳದಿಂದ ತೆಗೆಯಲಾಗಿದೆ ಎನ್ನಲಾಗಿದೆ. ಮೇಳದ ಕಲಾವಿದರ ಬದಲಾವಣೆಯ ವೇಳೆ ನಡೆದ ಕೆಲ ಭಿನ್ನಾಭಿಪ್ರಾಯದಲ್ಲಿ ಪಟ್ಲ ಭಾಗವತರಿಗೆ ಬೆಂಬಲವಾಗಿದ್ದ ಕಲಾವಿದರನ್ನು ಮೇಳದಿಂದ ತೆಗೆಯಲಾಗಿತ್ತು.

Advertisement

ಶನಿವಾರ ಸಂಜೆ ಮಂಗಳೂರಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ತುರ್ತು ಸಭೆ ಕರೆಯಲಾಗಿದ್ದು, ಇದರ ನಂತರ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next