Advertisement

ಮುಂದಿನ ತಿಂಗಳಿಗೆ ಜ್ಯೋತಿ ಸರ್ಕಲ್‌!

10:55 PM May 22, 2019 | Team Udayavani |

“ಕಟಪಾಡಿ ಕಟ್ಟಪ್ಪ ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಕ್ರೇಝ್ ಹುಟ್ಟುಹಾಕಿದೆ. ರಾಜೇಶ್‌ ಬ್ರಹ್ಮಾವರ ನಿರ್ಮಾಣ, ಜೆ.ಪಿ. ತುಮಿನಾಡ್‌ ನಿರ್ದೇಶನದ ಕಟ್ಟಪ್ಪ ತುಳು ಸಿನೆಮಾ 50ರ ದಿನದ ಭರ್ಜರಿ ಪ್ರದರ್ಶನದ ಮೂಲಕ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ದಾಖಲೆ ಬರೆದಿದೆ.

Advertisement

ಇದೇ ಮೂಡ್‌ನ‌ಲ್ಲಿ ರಾಜೇಶ್‌ ಬ್ರಹ್ಮಾವರ ಮತ್ತೂಂದು ಸಿನೆಮಾ
“ಮಾಜಿ ಮುಖ್ಯಮಂತ್ರಿ’ಯ ಕೊನೆಯ ಹಂತದ ಶೂಟಿಂಗ್‌ನಲ್ಲಿದ್ದಾರೆ. ಅದೇ ವೇಳೆಗೆ “ಜ್ಯೋತಿ ಸರ್ಕಲ್‌’ ಶೂಟಿಂಗ್‌ ಮಾಡುವ ಬಗ್ಗೆ ಸಿದ್ಧತೆ ನಡೆಸಿದ್ದರು.

ವಿಶೇಷವೆಂದರೆ ಇದೇ ತಿಂಗಳಿನಲ್ಲಿ ಶೂಟಿಂಗ್‌ ಆರಂಭಿಸುವ ಬಗ್ಗೆ ನಿರ್ಧರಿಸಿದ್ದರು. ಆದರೆ, ಕಲಾವಿದರ ಡೇಟ್‌ ಕರೆಕ್ಟಾಗಿ ಸಿಗದ ಕಾರಣದಿಂದ ಈ ತಿಂಗಳಿನಲ್ಲಿ ಶೂಟಿಂಗ್‌ ಆಗಬೇಕಾದ ಜ್ಯೋತಿ ಸರ್ಕಲ್‌ ಮುಂದಿನ ತಿಂಗಳಿಗೆ ಶಿಫ್ಟ್ ಆಗಿದೆ. ರಾಜೇಶ್‌ ಬಂದ್ಯೋಡು ನಿರ್ದೇಶನದಲ್ಲಿ ಈ ಸಿನೆಮಾ ಮೂಡಿಬರಲಿದೆ. ತುಳುವಿನಲ್ಲಿ ವಿಭಿನ್ನ ಕಥಾನಕವನ್ನು ಹೊಂದಿರುವ ಸಿನೆಮಾ ಎಂಬ ಹೆಗ್ಗಳಿಕೆಯನ್ನು ಜ್ಯೋತಿ ಸರ್ಕಲ್‌ ಪಡೆದುಕೊಳ್ಳಲಿದೆ.

ಹೊಸ ತರದ ಕಥೆಯಾಧಾರಿತವಾಗಿ ಸಿನೆಮಾ ರೂಪುಗೊಳ್ಳಲಿದೆ. ಸಿನೆಮಾದಲ್ಲಿ ಯಾರಿರಲಿದ್ದಾರೆ ಎಂಬುದಕ್ಕೆ ಸದ್ಯ ಉತ್ತರವಿಲ್ಲ. ಆದರೆ, ಹೊಸ ಮುಖಗಳೊಂದಿಗೆ ಹೊಸ ಜಮಾನ ಸೃಷ್ಟಿಸಬೇಕು ಎಂಬುದು ರಾಜೇಶ್‌ ಅವರ ಚಿಂತನೆ. ಹೀಗಾಗಿ ಯಾರೆಲ್ಲ ಕಲಾವಿದರು ಇದ್ದಾರೆ ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next