Advertisement

ಕಾಶ್ಮೀರಿ ಯುವಕರಿಗೆ ತಪ್ಪು ಮಾರ್ಗದರ್ಶನ: ಜ|ರಾವತ್‌ ಖಡಕ್‌ ಎಚ್ಚರಿಕೆ

12:08 PM Nov 13, 2018 | Team Udayavani |

ಹೊಸದಿಲ್ಲಿ : ಜಮ್ಮು ಕಾಶ್ಮೀರದ ಯುವಕರಿಗೆ ತಪ್ಪು ಮಾರ್ಗದರ್ಶನ ನೀಡಿ ಅವರನ್ನು ಹಿಂಸೆಗೆ ಇಳಿಸುವವರಿಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಕಟುವಾದ ಎಚ್ಚರಿಕೆ ನೀಡಿದ್ದಾರೆ.

Advertisement

ಕಾಶ್ಮೀರಿ ಯುವಕರು ತಮ್ಮ ಕಾಲನಿಗಳಲ್ಲಿ ಮತ್ತು ಮಸೀದಿಗಳಲ್ಲಿ ಹರಡಲಾಗುವ ವದಂತಿಗಳನ್ನು ನಂಬಿ ತಪ್ಪು ದಾರಿಗೆ ಇಳಿದು ಹಿಂಸೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂದು ಜನರಲ್‌ ರಾವತ್‌ ಹೇಳಿದರು. 

ಮೌಲ್ವಿಗಳು ಮಸೀದಿಗಳಲ್ಲಿ, ಮದ್ರಸಗಳಲ್ಲಿ ಕಾಶ್ಮೀರಿ ಯುವಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದರ ಪರಿಣಾಮವಾಗಿ ಸಾವಿರಾರು ಯುವಕರು ಬೀದಿಗೆ ಇಳಿಯುತ್ತಿದ್ದಾರೆ; ರಾಜ್ಯ ಸರಕಾರ ಮತ್ತು ಸೇನಾ ಪಡೆಗಳ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳಿಗೆ ಇಳಿಯುತ್ತಿದ್ದಾರೆ ಎಂದು ಜ| ರಾವತ್‌ ಹೇಳಿದರು.

ಜಮ್ಮು ಕಾಶ್ಮೀರದ ಜನರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳದೆ ವಿವೇಕದಿಂದ ವರ್ತಿಸಿ ಶಾಂತಿಯನ್ನು ಕಾಪಿಡಬೇಕು ಎಂದು ರಾವತ್‌ ಒತ್ತಾಯಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next