Advertisement

Kashmir;ಮೆಹಬೂಬಾ-ಒಮರ್‌ ಅಬ್ದುಲ್ಲಾ ಗೃಹಬಂಧನ ಆರೋಪ

12:52 AM Jul 14, 2024 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರದ ಮಾಜಿ ಸಿಎಂಗಳಾದ ಮೆಹಬೂಬಾ ಮುಫ್ತಿ, ಒಮರ್‌ ಅಬ್ದುಲ್ಲಾ ಸಹಿತ ಕೆಲವು ನಾಯಕರು ಶನಿವಾರ ತಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿದ್ದಾರೆ. 1931ರಲ್ಲಿ ಅಂದಿನ ಮಹಾರಾಜರು 22 ಮಂದಿ ಕಾಶ್ಮೀರಿಗಳನ್ನು ಗುಂಡಿಟ್ಟು ಕೊಂದ ನೆನಪಲ್ಲಿ ಹುತಾತ್ಮದ ಸಮಾಧಿಗೆ ಪ್ರತೀ ವರ್ಷ ಕಣಿವೆಯ ರಾಜಕೀಯ ಪಕ್ಷಗಳ ನಾಯಕರು ಭೇಟಿ ನೀಡುತ್ತಾರೆ. ಈಗ ಅಲ್ಲಿಗೆ ಭೇಟಿ ನೀಡದಂತೆ ತಡೆಯಲು ತಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಜತೆಗೆ ತಮ್ಮ ನಿವಾಸದ ಗೇಟ್‌ಗೆ ಬೀಗ ಹಾಕಿರುವ ಫೋಟೋವನ್ನೂ ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next