Advertisement

ಕಾಶ್ಮೀರ ಸಮಸ್ಯೆಗೆ ಸೇನಾ ಶಕ್ತಿ ಪರಿಹಾರವಲ್ಲ:ನ್ಯಾಶನಲ್‌ ಕಾನ್ಫರೆನ್ಸ್

07:38 PM Jun 20, 2018 | Team Udayavani |

ಶ್ರೀನಗರ : ಕಾಶ್ಮೀರದ ರಾಜಕೀಯ ಪ್ರಶ್ನೆಯನ್ನು ಆಂತರಿಕ ಮತ್ತು ಬಾಹ್ಯ ಮಾತುಕತೆಗಳ ಮೂಲಕ ಇತ್ಯರ್ಥ ಪಡಿಸಲು ಯತ್ನಿಸಬೇಕೇ ಹೊರತು ಕಾರ್ಯಾಚರಣೆ ಮತ್ತು ಸೇನಾ ಬಲದ ಮೂಲಕ ಅಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ನ್ಯಾಶನಲ್‌ ಕಾನ್ಫರೆನ್ಸ್‌ ಇಂದು ಬುಧವಾರ ಹೇಳಿದೆ.

Advertisement

ಪಕ್ಷದ ಉನ್ನತರ ಸಮೂಹದೊಂದಿಗೆ ಸಭೆ ನಡೆಸಿದ ಬಳಿಕ ಹೇಳಿಕೆಯೊಂದನ್ನು ಹೊರಡಿಸಿದ ನ್ಯಾಶನಲ್‌ ಕಾನ್ಫರೆನ್ಸ್‌ ಉಪಾಧ್ಯಕ್ಷ ಉಮರ್‌ ಅಬ್ದುಲ್ಲ ಅವರು “ಕಾಶ್ಮೀರದ ರಾಜಕೀಯ ಪ್ರಶ್ನೆಯನ್ನು ಆಂತರಿಕ ಮತ್ತು ಬಾಹ್ಯ ಮಾತುಕತೆ, ಸಂವಾದದ ಮೂಲಕ ಬಗೆಹರಿಸಲು ಯತ್ನಿಸಬೇಕು; ಸೇನಾಶಕ್ತಿ, ಕಾರ್ಯಾಚರಣೆಯಿಂದ ಅಲ್ಲ’ ಎಂದು ಪಕ್ಷದ ನಿಲುವನ್ನು ಖಚಿತಪಡಿಸಿದರು. 

ರಾಜ್ಯದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರದ ಪತನದ ಬಳಿಕ ರಾಜ್ಯಪಾಲರ ಆಳ್ವಿಕೆ ಅಸ್ತಿತ್ವಕ್ಕೆ ಬಂದಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಉಮರ್‌ ಅಬ್ದುಲ್ಲ ಅವರು ತಮ್ಮ ಪಕ್ಷದ ಉನ್ನತರ ಸಭೆಯೊಂದನ್ನು ಕರೆದು ತಾಜಾ ವಿದ್ಯಮಾನಗಳನ್ನು ಚರ್ಚಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next