Advertisement

ಕಾಶ್ಮೀರ ವಿಷಯ ಆಂತರಿಕ ಎಂದ ಭಾರತ 

12:30 AM Mar 04, 2019 | |

ಹೊಸದಿಲ್ಲಿ : ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಕಾಶ್ಮೀರ ವಿಚಾರ ಆಂತರಿಕವಾದುದು ಎಂದು ಭಾರತ ಸ್ಪಷ್ಟಪಡಿಸಿದೆ. 

Advertisement

ಅಬುಧಾಬಿಯಲ್ಲಿ ನಡೆದ ಮುಸ್ಲಿಂ ರಾಷ್ಟ್ರಗಳ ಒಕ್ಕೂಟ (ಒಐಸಿ) ಸಮ್ಮೇಳನದಲ್ಲಿ  ಕಾಶ್ಮೀರ ಕುರಿತಂತೆ ಮಂಡಿಸಲಾದ ನಿಲುವಳಿ ಬಗ್ಗೆ ವಿದೇಶಾಂಗ ಸಚಿವಾಲಯ ಈ ಪ್ರತಿಕ್ರಿಯೆ ನೀಡಿದೆ. 

ಕಾಶ್ಮೀರ ವಿಚಾರದಲ್ಲಿ ಪಾಕಿಸ್ಥಾನವನ್ನು ಬೆಂಬಲಿಸಿ ಒಐಸಿಯಲ್ಲಿ ನಿಲುವಳಿ ಮಂಡಿಸಲಾಗಿದೆ ಎಂದು ಪಾಕಿಸ್ಥಾನದ ವಿದೇಶಾಂಗ ಸಚಿವಾಲಯ ಪ್ರಕಟಿಸಿತ್ತು. ಭಾರತ ಮತ್ತು ಪಾಕಿಸ್ಥಾನದ ಮಧ್ಯದ ವಿವಾದಕ್ಕೆ ಜಮ್ಮು ಕಾಶ್ಮೀರವು ಪ್ರಮುಖ ಸಮಸ್ಯೆಯಾಗಿದೆ. ದಕ್ಷಿಣ ಏಷ್ಯಾದ ಶಾಂತಿಗೆ ಈ ಸಮಸ್ಯೆಯನ್ನು ಬಗೆಹರಿಸುವುದು ಅತ್ಯಂತ ಅಗತ್ಯ ಎಂದು ಸಮ್ಮೇಳನದ ನಿಲುವಳಿಯಲ್ಲಿ ನಮೂದಿಸಲಾಗಿದೆ. 57 ದೇಶಗಳ ಒಐಸಿಯ ಮೊದಲ ದಿನ ಇದೇ ಮೊದಲ ಬಾರಿಗೆ ಭಾರತ ಭಾಗವಹಿಸಿತ್ತು. ಇದನ್ನು ವಿರೋಧಿಸಿ ಸಂಸ್ಥಾಪಕ ಸದಸ್ಯ ಪಾಕಿಸ್ಥಾನ ಸಭೆಯನ್ನು ಬಹಿಷ್ಕರಿಸಿತ್ತು. ಆದರೂ ಭಾರತಕ್ಕೆ ನೀಡಲಾದ ಆಹ್ವಾನವನ್ನು ಹಿಂಪಡೆಯದಿದ್ದುದು ಪಾಕಿಸ್ಥಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟು ಮಾಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next