Advertisement

ಓಳ್‌ ಮುನ್ಸಾಮಿ ತಂಡದಿಂದ ಕಾಶೀನಾಥ್‌ ಅವರಿಗೆ ಶ್ರದ್ಧಾಂಜಲಿ

10:45 AM Jan 31, 2018 | Team Udayavani |

ಇತ್ತೀಚೆಗೆ ನಿಧನರಾದ ಹಿರಿಯ ನಿರ್ದೇಶಕ, ನಟ ಕಾಶೀನಾಥ್‌ ಅವರಿಗೆ “ಓಳ್‌ ಮುನ್ಸಾಮಿ’ ಚಿತ್ರತಂಡ ಶ್ರದ್ಧಾಂಜಲಿ ಸಲ್ಲಿಸಿತು. ಆನಂದ ಪ್ರಿಯ ನಿರ್ದೇಶನದ “ಓಳ್‌ ಮುನ್ಸಾಮಿ’ ಚಿತ್ರದಲ್ಲಿ ಕಾಶೀನಾಥ್‌ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿನ ಮುನ್ಸಾಮಿ ಪಾತ್ರದಲ್ಲಿ ಕಾಶೀನಾಥ್‌ ನಟಿಸಿದ್ದಾರೆ. ಹೀಗಾಗಿ, ಆನಂದ ಪ್ರಿಯ ಅವರಿಗೆ ಒಂದು ವರ್ಷದಿಂದ ಕಾಶೀನಾಥ್‌ ಅವರ ಒಡನಾಟವಿತ್ತಂತೆ.

Advertisement

“ಸುಮಾರು ಒಂದು ವರ್ಷದಿಂದ ಕಾಶೀನಾಥ್‌ ಅವರ ಜೊತೆ ಒಡನಾಟವಿತ್ತು. ಚಿತ್ರದಲ್ಲಿನ ಮುನ್ಸಾಮಿ ಪಾತ್ರವನ್ನು ಯಾರಿಂದ ಮಾಡಿಸೋದೆಂದು ಯೋಚಿಸುತ್ತಿದ್ದಾಗ ನಮ್ಮ ಕಣ್ಣ ಮುಂದೆ ಬಂದಿದ್ದು ಕಾಶೀನಾಥ್‌ ಅವರು. ಅವರ ಬಳಿ ಹೋಗಿ ಕಥೆ ಹೇಳಿದಾಗ ಮೊದಲು ಅವರು ಹೇಳಿದ್ದು, ನನ್ನನ್ನು ನೀವು ಹಿರಿಯ ನಿರ್ದೇಶಕನಂತೆ ನೋಡಬಾರದು.

ನಿಮ್ಮ ನಿರ್ದೇಶನ ತಂಡದಲ್ಲಿ ಒಬ್ಬನಾಗಿ ಕಾಣಬೇಕು. ಬೇಕಾದರೆ ನನ್ನನ್ನು ಸಹಾಯ ನಿರ್ದೇಶಕನಂತೆ ನೋಡಿ. ನನಗೆ ಬರುವ ಆಲೋಚನೆಗಳನ್ನು ನಾನು ಹೇಳುತ್ತೇನೆ. ನಿಮಗೆ ಅದು ಒಪ್ಪಿಗೆಯಾದರೆ ಇಟ್ಟುಕೊಳ್ಳಬಹುದು ಎಂದು ತಂಡ ಸೇರಿಕೊಂಡರು. ಇಡೀ ಸಿನಿಮಾದಲ್ಲಿ ಅವರ ಪಾತ್ರ ತುಂಬಾ ಚೆನ್ನಾಗಿದೆ. ತುಂಬಾ ಖುಷಿ ಖುಷಿಯಾಗಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು.

ಅವರ ನೆನಪಿನ ಶಕ್ತಿ ಅದ್ಭುತವಾಗಿತ್ತು’ ಎಂದು ಕಾಶೀನಾಥ್‌ ಅವರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು. ಇದಲ್ಲದೇ, “ಓಳ್‌ ಮುನ್ಸಾಮಿ’ ನಂತರ ಮತ್ತೂಂದು ಚಿತ್ರವನ್ನೂ ಕಾಶೀನಾಥ್‌ ಜೊತೆಗೆ ಮಾಡುವ ಆಲೋಚನೆಯೂ ಆನಂದಪ್ರಿಯ ಅವರಿಗಿತ್ತಂತೆ. ಚಿತ್ರದಲ್ಲಿ ನಟಿಸಿರುವ ನಿರಂಜನ್‌ ಒಡೆಯರ್‌, ಗೌತಮ್‌, ಶಿವಮೊಗ್ಗದ ರಂಗಕಲಾವಿದರು, ನಿರ್ಮಾಪಕ ಕೇಶವ್‌ ಗೌಡ ಕೂಡಾ ಕಾಶೀನಾಥ್‌ ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು. 

Advertisement

Udayavani is now on Telegram. Click here to join our channel and stay updated with the latest news.

Next