Advertisement

ಕಾಸರಗೋಡು: ಪ್ರಧಾನ ಅಂಚೆ ಕಚೇರಿ ಮುಂದೆ ಧರಣಿ

11:50 PM Sep 20, 2019 | Sriram |

ಕಾಸರಗೋಡು: ಕೇಂದ್ರ ಸರಕಾರಿ ನೌಕರರ ನೂತನ ಪಿಂಚಣಿ ಯೋಜನೆ ಯನ್ನು ಉಪೇಕ್ಷಿಸಿ ಈ ಹಿಂದಿನ ರೀತಿಯ ಪಿಂಚಣಿ ವ್ಯವಸ್ಥೆಯನ್ನು ಮುಂದುವರಿ ಸಬೇಕು, ಕಮಲೇಶ್‌ ಚಂದ್ರ ಸಮಿತಿ ವರದಿಯ ಸವಲತ್ತುಗಳನ್ನು ಪೂರ್ಣವಾಗಿ ಜಾರಿ ಗೊಳಿಸಬೇಕು, ಆಶ್ರಿತ ನೇಮಕಾತಿ ನೀಡಬೇಕು ಮೊದಲಾದ ಬೇಡಿಕೆ ಗಳನ್ನು ಮುಂದಿಟ್ಟು ಭಾರತೀಯ ಪೋಸ್ಟಲ್‌ ಎಂಪ್ಲಾಯಿಸ್‌ ಫೆಡರೇಶನ್‌ನ ಕಾಸರ ಗೋಡು ವಿಭಾಗೀಯ ಸಮಿತಿ ನೇತೃತ್ವ ದಲ್ಲಿ ಕಾಸರಗೋಡು ಪ್ರಧಾನ ಅಂಚೆ ಕಚೇರಿಯ ಮುಂಭಾಗ ಸಂಜೆ ಧರಣಿ ನಡೆಯಿತು.

Advertisement

ಧರಣಿಯನ್ನು ಬಿ.ಪಿ.ಇ.ಎಫ್‌., ಸರ್ಕಲ್‌ ಸಂಚಾಲಕ ಕೊಟ್ಟೋಡಿ ನಾರಾ ಯಣನ್‌ ಉದ್ಘಾಟಿಸಿದರು. ಬಿಎಂಎಸ್‌ ಜಿಲ್ಲಾ ಕಾರ್ಯದರ್ಶಿ ಎ. ಶ್ರೀನಿವಾಸನ್‌, ಬಿಇಡಿಯು ರಾಜ್ಯ ಉಪಾ ಧ್ಯಕ್ಷ ಎ. ಗಂಗಾ ಧರನ್‌ ಮಾತನಾಡಿ ದರು. ಬಿ.ಪಿ.ಇ.ಎಫ್‌. ಕಾಸರಗೋಡು ವಿಭಾಗೀಯ ಸಂಚಾಲಕ ಬಿ. ವಾಸುದೇವ ಅಧ್ಯಕ್ಷತೆ ವಹಿಸಿದರು. ಆರ್‌.ಎಂ.ಎಸ್‌. ಯೂನಿಯನ್‌ ಅಧ್ಯಕ್ಷ ಭಾಸ್ಕರ ಸ್ವಾಗತಿಸಿದರು. ಗೋಪಾಲಕೃಷ್ಣನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next