Advertisement

ಕಾಸರಗೋಡು: ಬಿಜೆಪಿಯಿಂದ ವಿಜಯೋತ್ಸವ; ಸಿಹಿ ತಿಂಡಿ, ಪಾಯಸ ವಿತರಣೆ

12:41 AM Jun 01, 2019 | Team Udayavani |

ಕಾಸರಗೋಡು: ಕೇಂದ್ರದಲ್ಲಿ ಮೋದಿ ಸರಕಾರದ ರಚನೆ ಹಾಗೂ ಪ್ರಮಾಣ ಸ್ವೀಕಾರದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಅಲ್ಲಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿತಿಂಡಿ, ಪಾಯಸ, ಐಸ್‌ಕ್ರೀಂ ಮೊದಲಾದವುಗಳನ್ನು ವಿತರಿಸಿದರು.

Advertisement

ಕಾಸರಗೋಡು ನಗರದ ಕರಂದಕ್ಕಾಡು ಮೊದಲಾದೆಡೆಗಳಲ್ಲಿ ಬಿಗ್‌ ಸ್ಕ್ರೀನ್‌ ಸ್ಥಾಪಿಸಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ನೇರ ಪ್ರಸಾರ ನಡೆಸಲಾಯಿತು. ಇದರ ಮುಂದೆ ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದರು.

ಮೋದಿ ಫ್ಯಾನ್ಸ್‌ ಚಾರಿಟೇಬಲ್ ಟ್ರಸ್ಟ್‌ನ ಆಶ್ರಯದಲ್ಲಿ ಮೈಲಾಟಿಯಲ್ಲಿ ಸಿಹಿ ವಿತರಿಸಿದರು. ಬಿಜೆಪಿ ಜಿಲ್ಲಾ ಮೀಡಿಯಾ ಸೆಲ್ ಸಂಚಾಲಕ ವೈ.ಕೃಷ್ಣದಾಸ್‌ ಉದ್ಘಾಟಿಸಿದರು. ಮೋದಿ ಫ್ಯಾನ್ಸ್‌ ಚಾರಿಟೆಬಲ್ ಟ್ರಸ್ಟ್‌ ಅಧ್ಯಕ್ಷ ಕೆ.ಪ್ರತಾಪನ್‌ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ದಿನೇಶನ್‌, ಬಿಜೆಪಿ ಉದುಮ ಪಂಚಾಯತ್‌ ಉಪಾಧ್ಯಕ್ಷ ಸುರೇಶ್‌ ಎರೋಲ್, ಬಿಜೆಪಿ ಪಳ್ಳಿಕೆರೆ ಪಂಚಾಯತ್‌ ಕಾರ್ಯದರ್ಶಿ ಲೋಕೇಶ್‌ ಬಟ್ಟತ್ತೂರು, ಅನಿಲ್ ಕುಮಾರ್‌, ಅಶೋಕನ್‌, ವಿನೋದ್‌, ಶ್ರೀಕೇಶ್‌, ಪುರುಷೋತ್ತಮನ್‌ ಮೊದಲಾದವರು ನೇತೃತ್ವ ನೀಡಿದರು.

ಕೇಂದ್ರದಲ್ಲಿ ಮೋದಿ ಸರಕಾರ ರಚನೆ ಹಾಗೂ ಪ್ರಮಾಣ ಸ್ವೀಕಾರದ ಹಿನ್ನೆಲೆಯಲ್ಲಿ ಬಿಜೆಪಿ ಮಂಜೇಶ್ವರ ಪಂಚಾಯತ್‌ ಸಮಿತಿ ವತಿಯಿಂದ ಹೊಸಂಗಡಿ ಪೇಟೆಯಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಿತು. ಪಟಾಕಿ ಸಿಡಿಸಿ, ಸಿಹಿತಿಂಡಿ ವಿತರಿಸಲಾಯಿತು. ಜಿಲ್ಲಾ ಸಮಿತಿ ಸದಸ್ಯ ಪದ್ಮನಾಭ ಕಡಪ್ಪುರ, ಮಂಡಲ ಕಾರ್ಯದರ್ಶಿ ಆದರ್ಶ್‌ ಬಿ.ಎಂ, ಒಬಿಸಿ ಮೋರ್ಚಾ ರಾಜ್ಯ ಸಮಿತಿ ಸದಸ್ಯ ನವೀನ್‌ ರಾಜ್‌ ಕೆ.ಜಿ, ದೇವರಾಜ್‌ ಎಂ.ಎಸ್‌, ದಯಾಪ್ರಸನ್ನ ಆಚಾರ್ಯ, ರಂಜಿತ್‌ ಬಾಬು ನೇತೃತ್ವ ನೀಡಿದರು.

ಮೀಯಪದವು ಜಂಕ್ಷನ್‌ನಲ್ಲಿ ಯುವಮೋರ್ಚಾ, ಬಿಜೆಪಿ ನೇತೃತ್ವದಲ್ಲಿ ಸಂಭ್ರಮ ಆಚರಿಸಲಾಯಿತು. ಮಜಿಬೈಲ್ನ ಪಜಿಂಗಾರ್‌ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ವರ್ಕಾಡಿಯಲ್ಲಿ ಯುವಮೋರ್ಚಾ ಕಾರ್ಯಕರ್ತರು, ನಮೋ ಬಳಗ ಮಜೀರ್ಪಳ್ಳ ವತಿಯಿಂದ ಮುರತ್ತಣೆಯಿಂದ ಮಜೀರ್‌ಪಳ್ಳ ಜಂಕ್ಷನ್‌ ವರೆಗೆ ವಿಜಯೋತ್ಸವ ಮೆರವಣಿಗೆ ನಡೆಸಿದರು. ಮಂಜೇಶ್ವರ ಕೆದುಂಬಾಡಿಯಲ್ಲಿ, ತೂಮಿನಾಡಿನಲ್ಲಿ ವಿಜಯೋತ್ಸವ ಆಚರಿಸಲಾಯಿತು. ಮಂಗಲ್ಪಾಡಿ ಪಂಚಾಯತ್‌ ಬಿಜೆಪಿ ವತಿಯಿಂದ ಉಪ್ಪಳದಲ್ಲಿ ಮೆರವಣಿಗೆ ನಡೆಯಿತು. ಬೆಳ್ಳೂರು ಪಂಚಾಯತ್‌ ಬಿಜೆಪಿ ಸಮಿತಿ ವತಿಯಿಂದ ವಿಜಯೋತ್ಸವ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next