Advertisement
ಕಣ್ಣೂರು ವಿಮಾನ ನಿಲ್ದಾಣ ಯೋಜನೆಯ ಕಾಮಗಾರಿ ಪೂರ್ತಿ ಗೊಂಡ ಬೆನ್ನಲ್ಲೇ ಕಾಸರಗೋಡು ಜಿಲ್ಲೆಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಗೆ ಚಾಲನೆ ಲಭಿಸಲಿದೆ. ಬೃಹತ್ ರನ್ವೇ ಅಗತ್ಯವಿಲ್ಲದ ಕಿರು ವಿಮಾನಗಳ ಸೇವೆ ಆರಂಭಿಸುವ ರೀತಿಯಲ್ಲಿ ನಿಲ್ದಾಣವನ್ನು ನಿರ್ಮಿಸಲು ಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಪ್ರವಾಸಿ ಭೂಪಟದಲ್ಲಿ ಸ್ಥಾನ ಪಡೆದಿರುವ ಇತಿಹಾಸ ಪ್ರಸಿದ್ಧ ಬೇಕಲ ಕೋಟೆಯನ್ನು ಕೇಂದ್ರವಾಗಿರಿಸಿ ಪ್ರವಾಸೋದ್ಯಮ ಕೇಂದ್ರಗಳನ್ನು ಅಭಿವೃದ್ಧಿಗೊಳಿಸುವ ಮತ್ತು ಇನ್ನಷ್ಟು ಪ್ರವಾಸಿಗರನ್ನು ಕಾಸರಗೋಡಿಗೆ ಸ್ವಾಗತಿಸುವ ಉದ್ದೇಶವನ್ನು ಇರಿಸಿಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಿಸುವ ಬಹುತೇಕ ತೀರ್ಮಾನಕ್ಕೆ ಬರಲಾಗಿದೆ.
Related Articles
Advertisement
ತೋಟಗಾರಿಕಾ ನಿಗಮದ ಮುಳಿಯಾರು ಎಸ್ಟೇಟ್ನ ಕೈಕೆಳಗಿರುವ ಮುದಲಪ್ಪಾರ, ಬೋವಿಕ್ಕಾನ, ಆಲೂರು ಎಸ್ಟೇಟ್ಗಳಲ್ಲಿ ನೂರಾರು ಹೆಕ್ಟರ್ ಪ್ರದೇಶ ಬಂಜರು ಭೂಮಿಯಾಗಿ ಉಳಿದಿದೆ.
ಕಮಿಷನರ್ ಕೆ.ಆರ್.ಜ್ಯೋತಿಲಾಲ್ಕಾಸರಗೋಡು ಜಿಲ್ಲಾಧಿಕಾರಿ ಡಾ|ಡಿ.ಸಜಿತ್ ಬಾಬು, ಬಿಆರ್ಡಿಸಿ ಎಂ.ಡಿ. ಟಿ.ಕೆ.ಮನ್ಸೂರು, ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಸ್ಥೆಯಾದ ಸಿಯಾಲ್ ಪ್ರತಿನಿಧಿ, ರಾಜ್ಯ ವಿತ್ತ ಖಾತೆ ಪ್ರತಿನಿಧಿಗಳು ಸಮಿತಿ ಸದಸ್ಯರಾಗಿದ್ದಾರೆ. ಈ ತಂಡ ಒಂದು ತಿಂಗಳೊಳಗೆ ಅಧ್ಯಯನ ವರದಿಯನ್ನು ಸಲ್ಲಿಸಲು ಸರಕಾರ ನಿರ್ದೇಶಿಸಿದೆ.
ಮುಲ್ಲಚ್ಚೇರಿಯಡ್ಕಂ, ಅಡ್ಕಂ, ಮೂಲಯಡ್ಕಂ, ಆಲನಡ್ಕಂ, ಮೈಕುಳಿ ಮೊದಲಾದ ಸ್ಥಳಗಳು ವಿಶಾಲವಾಗಿ ನೆನೆಗುದಿಗೆ ಬಿದ್ದಿದೆ.
ಆಲನಡ್ಕದ ಮಯಿಲಾಡುಂಪಾರ ಪ್ರದೇಶದಲ್ಲಿ ನೂರಾರು ಎಕ್ರೆ ಸ್ಥಳವೂ ಇದೆ. ಈ ಪ್ರದೇಶಗಳಿಗೆ ಸರಕಾರ ನೇಮಿಸಿರುವ ಪಂಚ ಸದಸ್ಯರ ನಿಯೋಗ ಶೀಘ್ರದಲ್ಲೇ ಸಂದರ್ಶಿಸಿ ಅಧ್ಯಯನ ನಡೆಸಲಿದೆ.
ಜಿಲ್ಲಾ ಪಂಚಾಯತ್ ಬಜೆಟ್ನಲ್ಲಿ ಘೋಷಣೆ ಕಾಸರಗೋಡು ಜಿಲ್ಲಾ ಪಂಚಾಯತ್ ಕಳೆದ ಮುಂಗಡ ಪತ್ರದಲ್ಲಿ ಏರ್ ಸ್ಟಿÅಪ್ ನಿರ್ಮಿಸುವ ಕುರಿತು ಘೋಷಿಸಿತ್ತು. ಇದೀಗ ಇದರ ಸಾಧ್ಯತೆಯ ಬಗ್ಗೆ ಸರಕಾರ ಅಧ್ಯಯನ ನಡೆಸಲು ಐವರ ಸಮಿತಿಯನ್ನು ರಚಿಸಿರುವುದರಿಂದ ಮತ್ತೆ ಯೋಜನೆ ಸಾಕಾರದ ಬಗ್ಗೆ ಗರಿ ಬಿಚ್ಚಿದೆ. ಈ ಹಿಂದೆ ಜಿಲ್ಲಾ ಪಂಚಾಯತ್ ಏರ್ ಸ್ಟಿÅಪ್ ಎಂಬ ಆಶಯವನ್ನು ಮುಂದಿಟ್ಟಾಗ ವಿವಿಧ ಸಂಘಸಂಸ್ಥೆಗಳು, ಬೃಹತ್ ಉದ್ಯಮಿಗಳು ಬೆಂಬಲ ವ್ಯಕ್ತಪಡಿಸಿದ್ದರು. ಹಿಂದಿನ ಸರಕಾರ ಇದಕ್ಕಾಗಿ ಏರ್ ಸ್ಟಿÅಪ್ ಸ್ಥಾಪಿಸಲು 80 ಎಕರೆ ಸ್ಥಳವನ್ನು ಮಂಜೂರು ಮಾಡಿತ್ತು. ತೋಟಗಾರಿಕಾ ನಿಗಮದ ಸ್ಥಳವನ್ನು ಇದಕ್ಕಾಗಿ ಕಾದಿರಿಸಲಾಗಿತ್ತು. ಕೇಂದ್ರ ವಿಶ್ವವಿದ್ಯಾಲಯ, ಬೇಕಲ ಕೋಟೆ ಮೊದಲಾದವುಗಳ ಪಕ್ಕದ ಪ್ರದೇಶದಲ್ಲಿ ಏರ್ ಸ್ಟಿÅಪ್ ಸ್ಥಾಪಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಗೊಳಿಸಲು ತೀರ್ಮಾನಿಸಲಾಗಿತ್ತು. ಮುಳಿಯಾರು ಪರಿಗಣನೆ
ಕಿರು ವಿಮಾನ ನಿಲ್ದಾಣ ಸ್ಥಾಪಿಸಬೇಕೆಂಬ ಆಶಯ ವಾಗಿದ್ದರೂ ಸಾಕಷ್ಟು ಸೌಕರ್ಯ ಗಳಿರುವ ವಿಮಾನ ನಿಲ್ದಾಣ ನಿರ್ಮಿಸ ಬೇಕೆಂಬ ಕಲ್ಪನೆ ಮೂಡಿತು.ಪೆರಿಯಾದಲ್ಲಿ ಸ್ಥಳಾವಕಾಶ ಕೊರತೆಯಿದೆ. ಈಹಿನ್ನೆಲೆಯಲ್ಲಿ ತೋಟಗಾರಿಕಾ ನಿಗಮದ ಸ್ವಾಧೀನದಲ್ಲಿರುವ ಮುಳಿಯಾರುಎಸ್ಟೇಟ್ ಸ್ಥಳವನ್ನು ಪರಿಗಣಿಸಲಾಗಿದೆ. ಇದೀಗ 300 ಎಕ್ರೆ ಸ್ಥಳದಲ್ಲಿ ನಿಲ್ದಾಣ ಸ್ಥಾಪಿಸುವ ಕುರಿತು ಪರಿಗಣಿಸಲಾಗಿದೆ. ಅಧಿಸೂಚನೆ
ಮಹತ್ವಾಕಾಂಕ್ಷೆಯ ಮಿನಿ ವಿಮಾನ ನಿಲ್ದಾಣ(ಏರ್ ಸ್ಟಿÅಪ್) ಕಾಸರಗೋಡಿನಲ್ಲಿ ಸ್ಥಾಪಿಸುವ ಕುರಿತು ಸರಕಾರ ಉತ್ಸುಕವಾಗಿದ್ದು, ಈ ಹಿನ್ನೆಲೆಯಲ್ಲಿ ಸಾಧ್ಯತೆ ವರದಿ ಸಲ್ಲಿಕೆಗೆ ಸರಕಾರ ಐವರು ಸದಸ್ಯರನ್ನು ನೇಮಿಸಿದೆ. ನಾಗರಿಕ ವ್ಯೋಮಯಾನದ ಹೊಣೆಗಾರಿಕೆ ಹೊಂದಿರುವ ಕಮಿಷನರ್ ಕೆ.ಆರ್.ಜ್ಯೋತಿಲಾಲ್ ನೇತೃತ್ವದಲ್ಲಿ ವಿಶೇಷ ಸಮಿತಿಗೆ ರೂಪು ನೀಡಿ ಸರಕಾರ ಅಧಿಸೂಚನೆ ಹೊರಡಿಸಿದೆ
– ಎ.ಜಿ.ಸಿ.ಬಶೀರ್
ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಪಂಚಾಯತ್